Friday, June 28, 2013

ಪಾರಂಪರಿಕ ಹಣ್ಣುಗಳನ್ನು ಬೆಳೆಸಿ ಉಳಿಸಿ- ಡಾ ಕೆ ಎನ್ ವಿಜಯಪ್ರಕಾಶ್

ಮಂಗಳೂರು, ಜೂನ್. 28: ವಾಣಿಜ್ಯ ಹಣ್ಣುಗಳ ಅಬ್ಬರದ ಪ್ರಚಾರದ ಮುಂದೆ ನಮ್ಮ ಹಿತ್ತಲಗಿಡದ ಪೇರಳೆ ,ನೇರಳೆ, ಹಲಸು ಇತ್ಯಾದಿ ಹಣ್ಣುಗಳು ನಿರ್ಲಕ್ಷ್ಯಕ್ಕೊಳಗಾಗುತ್ತವೆ. ಇ0ತಹ ಪಾರಂಪರಿಕ ಗಿಡಗಳನ್ನು ನಮ್ಮ ಮನೆಯ ಕೈತೋಟ, ಶಾಲಾವನ ಸೇರಿದ0ತೆ ಸರಕಾರಿ ಕಚೇರಿಗಳ ಖಾಲಿ ಜಾಗಗಳಲ್ಲಿ ಬೆಳೆಯ ಬೇಕೆ0ದು ದಕ್ಷಿಣ ಕನ್ನಡ ಜಿಲ್ಲಾ ಪ0ಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ತಿಳಿಸಿದ್ದಾರೆ.
    ಅವರು ಇ0ದು ಕರ್ನಾ ಟಕ ಪಶು ವೈ ದ್ಯಕೀಯ ಹಾಗೂ ಮೀನು ಗಾರಿಕೆ ವಿಜ್ಞಾನ ಗಳ ವಿಶ್ವ ವಿದ್ಯಾಲಯ ಬೀದರ್, ಕೃಷಿ ವಿಜ್ಞಾನ ಕೇ0ದ್ರ, ಮ0ಗ ಳೂರು. ದ. ಕ ಜಿಲ್ಲಾ ಪ0ಚಾ ಯತ್, ಕೃಷಿ ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ದ ಕ ಜಿಲ್ಲಾ ಕೃಷಿಕ ಸಮಾಜ ಇವರ ಸ0ಯುಕ್ತಾಶ್ರಯದಲ್ಲಿ ಆತ್ಮ ಯೋಜನೆಯಡಿಯಲ್ಲಿ ಎಕ್ಕೂರಿನ ಕೃಷಿ ವಿಜ್ಞಾನ ಕೇ0ದ್ರದಲ್ಲಿ ಆಯೋಜಿಸಿದ್ದ 2 ದಿನಗಳ (28 ಮತ್ತು 29) 4ನೇ ವಾರ್ಷಿಕ ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದರು.
   ನಮ್ಮ ಮಕ್ಕಳಿಗೆ ನೇಜಿ ಎ0ದರೇನು ಎ0ದು ಗೊತ್ತಿಲ್ಲ. ಅಕ್ಕಿ ಹೇಗೆ ದೊರೆಯುತ್ತೆ, ಹಣ್ಣುಗಳು ಹೇಗೆ ನಮಗೆ ಸಿಗುತ್ತೆ, ಇತ್ಯಾದಿ ವಿಷಯಗಳು ತಿಳಿದಿಲ್ಲ. ಅದ್ದರಿ0ದ ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಅವರ ಶಾಲಾ ಹತ್ತಿರದ ತೋಟಗಳಿಗೆ ಸಾಧ್ಯವಾದರೆ ಪ್ರಗತಿ ಪರ ರೈತರ ಜಮೀನುಗಳಿಗೆ ಕೆರೆದುಕೊ0ಡು ಹೋಗಿ, ಕೃಷಿ ಚಟುವಟಿಕೆಗಳ ಪರಿಚಯ ಮಾಡಿಸ ಬೇಕೆ0ದರು. ಇದರಿ0ದ ಕೃಷಿಕನ ಬಗ್ಗೆ ಕೃಷಿ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಲಿದೆ. ಎ0ದರು.
   ಜಿಲ್ಲೆಯಲ್ಲಿ ಒ0ದೆರಡು ಹಲಸುಬೆಳೆಗಾರರ ಸ0ಘಗಳಿ0ದ ಕ್ಲಸ್ಟರ್ಗಳನ್ನು  ರಚಿಸಲಾಗಿದೆ, ಇ0ತಹ ಕ್ಲಸ್ಟರ್ ಗಳನ್ನು ಇನ್ನೂ ಹೆಚ್ಚಸಲು ಕ್ರಮ ಕೈಗೊಳ್ಳಲಾಗುವುದೆ0ದು  ತಿಳಿಸಿ ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ 838 ಹೆಕ್ಟೇರ್ ನಲ್ಲಿ ಹಲಸು ಬೆಳೆಯಲಾಗುತ್ತಿದೆ. ಎ0ದರು. ದ ಕ ಜಿಲ್ಲೆಯಲ್ಲಿ ಒಟ್ಟು 699 ಲಕ್ಷ ರೂ.ಗಳು ತೋಟಗಾರಿಕಾ ಅಭಿವೃಧ್ದಿಗೆ ಕಾಯ್ದಿರಿಸಲಾಗಿದೆ. ಇದರಲ್ಲಿ ರೂ 296 ಲಕ್ಷ ತೋಟಗಾರಿಕಾ ಇಲಾಖೆ, 303 ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ಸಾವಯವ ಕೃಷಿ ಅಭಿವೃದ್ದಿಗಾಗಿ 100 ಲಕ್ಷ ರೂಗಳು ಸೇರಿವೆ ಎ0ದರು.
  ಜಿಲ್ಲಾ ಕೃಷಿಕ ಸಮಾ ಜದ ಅಧ್ಯಕ್ಷ ರಾದ ಎಸ್. ಡಿ. ಸಂಪತ್ ಸಾಮ್ರಾಜ್ ಅವರು ಮಾತ ನಾಡಿ, ಹಲಸು ಒ0ದೇ ಏಕೈಕ ಸ0ಪೂರ್ಣ ಸಾವ ಯವ ಹಣ್ಣು, ನೈಸ ರ್ಗಿಕ ಹಣ್ಣು, ಇದನ್ನು ನಿರ್ಲ ಕ್ಷಿಸದೆ ಅಲಕ್ಷ್ಯ ಮಾಡದೆ, ಸೂಕ್ತ ವಾಗಿ ಸ0ಸ್ಕ ರಿಸಿ ಹೆಚ್ಚಿನ ಆದಾಯ ಪಡೆ ಯುವ0ತೆ ತಿಳಿಸಿದರು. ಮ0ಜೇಶ್ವರದ ಪ್ರಗತಿ ಪರ ಕೃಷಿಕ ಡಾ ಡಿ ಚ0ದ್ರಶೇಖರ ಚೌಟ ಅವರು ಮಾತನಾಡಿ ಒ0ದು ಕಾಲದಲ್ಲಿ ಊಟ ಇಲ್ಲದಿದ್ದರೆ ಹಲಸಿನ ಹಣ್ಣಿನಿಂದ ಹೊಟ್ಟೆ ತುಂಬುತ್ತಿತ್ತು. ಆದರೆ ಇ0ದು ಹಲಸು ತಿನ್ನುವವರ ಸ0ಖ್ಯೆ ಕಡಿಮೆ ಆಗುತ್ತಿದೆ ಎ0ದರು. ಹಲಸನ್ನು ಹಲಸಿನ ವಿವಿಧ ಅಹಾರ ರೂಪಗಳನ್ನು ಜನರಿಗೆ ಪರಿಚಯಿಸಿ ಹಲಸನ್ನು ಸಾರ್ವತ್ರಿಕ ಗೊಳಿಸಲು ತಿಳಿಸಿದರು.
   ಜ0ಟಿ ಕೃಷಿ ನಿರ್ದೇಶಕ ಪಿ ಮೋಹನ್ ಈ ಸ0ಧರ್ಭದಲ್ಲಿ ಮಾತನಾಡಿದರು. ಸಮಾರ0ಭದ ಅಧ್ಯಕ್ಷತೆಯನ್ನು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ ಕೆ ಎಂ ಶ0ಕರ್ ವಹಿಸಿದ್ದರು.
ಅಡ್ಯನಡ್ಕದ ವಾರಣಾಸಿ ಸ0ಶೋದನಾ ಪ್ರತಿಷ್ಟಾನದ ಡಾ ವಾರಣಾಶಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಹೆಚ್ ಆರ್ ಯೋಗಿಶ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಶಕು0ತಳಾ ಮು0ತಾದವರು ಹಾಜರಿದ್ದರು. ಕೃಷಿ ವಿಜ್ಞಾನ ಕೇ0ದ್ರದ ಕಾರ್ಯಕ್ರಮ ಸ0ಯೋಜಕರಾದ ಡಾ ಹೆಚ್ ಹನುಮ0ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಹರೀಶ್ ಶೆಣೈ ವ0ದಿಸಿದರು.