Thursday, June 13, 2013

ಡೆಂಗ್ಯೂ ಪೀಡಿತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ.

ಮಂಗಳೂರು ಜೂನ್ 13: ನಗರದ  ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಡೆಂಗ್ಯೂ ಪೀಡಿತರನ್ನು ಇಂದು ಜಿಲ್ಲಾಧಿಕಾರಿ  ಎನ್. ಪ್ರಕಾಶ್ ಅವರು ಭೇಟಿ ಮಾಡಿ, ಸಾಂತ್ವಾನ ಹೇಳಿದರು. ಜ್ವರ ಪೀಡಿತರ ಬಗ್ಗೆ ವಿಶೇಷ ಮುತುವರ್ಜಿವಹಿಸಿ ಶುಶ್ರೂಸೆ ನೀಡಿ ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚನೆ ನೀಡಿದರು.    
ನಗ ರದ ಅತ್ತಾ ವರ ದಲ್ಲಿ ಒಟ್ಟು ಏಳು ಜನರು  ಡೆಂ ಗ್ಯೂ ಪೀಡಿ ತರಾ ಗಿದ್ದಾರೆ ಎಂಬ ಮಾಹಿ ತಿಯ ಹಿನ್ನಲೆ ಯಲ್ಲಿ ಅವ ರನ್ನು ವೀಕ್ಷಿ ಸಲು ತೆರ ಳಿದ ಜಿಲ್ಲಾ ಧಿಕಾರಿ ರೋಗ ಪೀಡಿ ತರಿಗೆ ನೀಡಿ ರುವ  ಚಿಕಿ ತ್ಸೆಯ ಬಗ್ಗೆ ಪರಿ ಶೀಲನೆ ನಡೆ ಸಿದರು.  ಇಬ್ಬ ರನ್ನು ಈಗಾ ಗಲೇ ಆಸ್ಪ ತ್ರೆಯಿಂ ದ ಬಿಡು ಗಡೆ ಗೊಳಿ ಸಲಾ ಗಿದ್ದು, ಪುತ್ತೂ ರಿನ ಕರು ಣಾಕರ ಅವ ರಿಗೆ ನೆಗೆ ಟಿವ್ ವರದಿ ಬಂದಿದೆ.  ಇನ್ನು ಉಳಿದ ಮೂವರು ಕೇರ ಳದ ಕಾಂಞ ಗಾಡು ಹಾಗೂ ನಿಲೇ ಶ್ವರದ ನಿವಾ ಸಿಗಳು, ಇನ್ನೊ ಬ್ಬರು ಪುತ್ತೂರು  ಬೆಟ್ಟಂ ಪಾಡಿಯ ಅಬೂ ಬಕ್ಕರ್ ಎಂಬು ವವರು ಹಾಗೂ ಮತ್ತೊ ಬ್ಬರು ಸುಳ್ಯದ ತಮ್ಮಪ್ಪ ಎನ್ನುವವರು. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತಿದ್ದು ಗುಣಮುಖರಾಗುತ್ತಿದ್ದಾರೆ.