Thursday, December 13, 2012

ಹೊಸ ಸಮಾಜದ ನಿರ್ಮಾಣಕ್ಕೆ ಆಕಾಶವಾಣಿ ಮಾದರಿ- ಡಾ. ಮೋಹನ್ ಆಳ್ವ

ಮಂಗಳೂರು,ಡಿಸೆಂಬರ್.13: ಉತ್ತಮ, ಶ್ರೇಷ್ಠಮಟ್ಟದ ಸಾಂಸ್ಕೃತಿಕ, ಸಂಗೀತ, ಸಾಹಿತ್ಯ, ಯಕ್ಷಗಾನ, ಕೃಷಿ ಮುಂತಾದ ಹಲವು ಕಾರ್ಯಕ್ರಮಗಳ ಮೂಲಕ ನಗರ ಮತ್ತು ಹಳ್ಳಿಗಳಲ್ಲಿ ಪ್ರತಿನಿತ್ಯ ಸುಮಾರು 30ಲಕ್ಷದಷ್ಟು ಶೋತೃಗಳನ್ನು ಹೊಂದಿರುವ ಮಂಗಳೂರಿನ ಆಕಾಶವಾಣಿಯು ಸ್ವಾಸ್ಥ ಸಮಾಜದ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳಿಗೆ ಮಾದರಿಯಾಗಿದೆ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
  ಆಳ್ವಾಸ್ ಕನ್ನಡ ಸಂಸ್ಕೃತಿ ಅಧ್ಯ ಯನ ಕೇಂ ದ್ರದ ಸಹ ಕಾರ ದಲ್ಲಿ ಪ್ರಸಾರ ಭಾರತಿ(ಭಾರ ತೀಯ ಪ್ರಸಾರ ನಿಗಮ) ಆಕಾಶ ವಾಣಿ ಮಂಗ ಳೂರು ಇದರ ಆಶ್ರಯ ದಲ್ಲಿ ಬುಧವಾರ ವಿದ್ಯಾಗಿರಿಯ ರತ್ನಾಕರವರ್ಣೀ ವೇದಿಕೆಯಲ್ಲಿ ನಡೆದ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಯುವಜನರ ಮತ್ತು ವನಿತೆಯರ ವೈವಿಧ್ಯಮಯ ಕಾರ್ಯಕ್ರಮ "ಬಾನುಲಿ ವೈಭವ" ವನ್ನು ಉದ್ಘಾಟಿಸಿ ಮಾತನಾಡಿದರು.
 ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಆಶೀರ್ವಚನ ನೀಡಿ ಕರಾವಳಿಯ ಮತ್ತು ಮಲೆನಾಡಿನ ಜನರ ಬದುಕನ್ನು  ಶ್ರೀಮಂತಗೊಳಿಸಿ ಉತ್ತಮ ಜ್ಞಾನವನ್ನು ನೀಡಿದ ಮಾಧ್ಯಮ ಆಕಾಶವಾಣಿ. ಕನ್ನಡ ಮಾತ್ರವಲ್ಲದೆ ಬಹುಗಾಷಿಗರನ್ನು ಈ ಮಾಧ್ಯಮ ಸೆಳೆಯುವುದರ ಮೂಲಕ ಇತರ ಮಾಧ್ಯಮದ ಶ್ರೋತೃಗಳಿಗಿಂತ  ರೇಡಿಯೋ ತನ್ನದೇ ಆದ ಶ್ರೋತೃಗಳನ್ನು ದೇಶದಲ್ಲೇ ವಿಸ್ತರಿಸಿಕೊಂಡಿದೆ ಎಂದು ಹೇಳಿದರು.
 ಮಂಗ ಳೂರು ಆಕಾಶ ವಾಣಿಯ ಡಾ.ವಸಂತ ಕುಮಾರ್ ಪೆರ್ಲ ಅಧ್ಯಕ್ಷ ತೆಯನ್ನು ವಹಿಸಿ ಮಾತ ನಾಡುತ್ತಾ ಆಕಾಶ ವಾಣಿಯ ಒಳಗೆ ಮಾತ್ರ ವಲ್ಲದೆ ಹೊರಗೆ ಜನರ ಬಳಿಗೆ ಬಂದು ಅವರ ನೋವು ನಲಿವಿ ನಲ್ಲಿ ಸ್ಪಂದಿ ಸುವಂ ತಹ ಕೆಲಸ ವನ್ನು ಆಕಾಶ ವಾಣಿ ಮಾಡು ತ್ತಿದೆ ಎಂದರು.
  ಆಕಾಶವಾಣಿಯ ಉಪನಿರ್ದೇಶಕ ಜಿ.ರಮೇಶ್ಚಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
 ಕೆ.ಅಶೋಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಡಾ.ಸದಾನಂದ ಪೆರ್ಲ ವಂದಿಸಿದರು.
 ಸಭಾ ಕಾರ್ಯಕ್ರಮದ ನಂತರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ನಿಟ್ಟೆ ಡಾ.ಎನ್.ಎಸ್.ಎ.ಎಂ.ಪ್ರಥಮದರ್ಜೆ ಕಾಲೇಜು, ಮಿಜಾರಿನ ಆಳ್ವಾಸ್ ಇಂಜಿನಿ ಯರಿಂಗ್ ಕಾಲೇಜು ಮತ್ತು ಆಳ್ವಾಸ್ ಕಾಲೇ ಜಿನ ವಿದ್ಯಾ ರ್ಥಿಗ ಳಿಂದ ಯುವ ವೈಭವ ಹಾಗೂ "ರಂಗ ಮನೆ-ಸುಳ್ಯ" ಇದರ ಸದಸ್ಯ ರಿಂದ ರಂಗ ಗೀತೆ ಮತ್ತು ಜನ ಪದ ವೈವಿಧ್ಯ ಹಾಗೂ ಪುತ್ತೂರು ದರ್ಬೆಯ ಶ್ರೀ ಶಾರದಾ ಕಲಾ ಶಾಲೆಯ ಸದಸ್ಯರಿಂದ ಮತ್ತು ಮಹಿಳೆಯರಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ "ಮೇಘ ಸಂಧ್ಯಾ" ನಡೆಯಿತು.