Monday, December 3, 2012

ದ.ಕ:ಜಿಲ್ಲಾಧಿಕಾರಿಯಾಗಿ ಎನ್. ಪ್ರಕಾಶ್ ಅಧಿಕಾರ ಸ್ವೀಕಾರ

ಮಂಗಳೂರು,ಡಿಸೆಂಬರ್.03: ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್  ಅವರು ಇಂದು ಅಧಿಕಾರ ವಹಿಸಿ ಕೊಂಡಿದ್ದಾರೆ. ನಿರ್ಗಮನ ಜಿಲ್ಲಾಧಿಕಾರಿ  ಡಾ. ಎನ್.ಎಸ್.ಚನ್ನಪ್ಪ ಗೌಡ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ  ವರ್ಗಾವಣೆಗೊಂಡಿದ್ದು;  ಅವರು ನೂತನ ಜಿಲ್ಲಾಧಿಕಾರಿ ಅವರಿಗೆ  ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
  ನೂತನ ಜಿಲ್ಲಾಧಿ ಕಾರಿ ಎನ್. ಪ್ರಕಾಶ್ ಅವರು ಇದು ವರೆಗೆ ಕೆ.ಎಸ್ ಆರ್. ಟಿ ಸಿ ನಿರ್ದೇ ಶಕ ರಾಗಿ ದ್ದರು.ಮೂಲತ  ಮೈಸೂರು ಜಿಲ್ಲೆಯ ನಂಜನ ಗೂಡಿ ನವ ರಾದ ಅವರು  ಇತಿ ಹಾಸ ದಲ್ಲಿ ಸ್ನಾತ ಕೋತ್ತರ ಪದವಿ ಮತ್ತು ಕಾನೂನು ಪದವಿ ಪಡೆದಿ ದ್ದಾರೆ. `ಬಿ' ದರ್ಜೆಯ ಅಧಿಕಾರಿಯಾಗಿ 1978 ರಲ್ಲಿ ಸರಕಾರಿ ಸೇವೆಗೆ ಸೇರಿದರು. ವಿಧಾನ ಸೌಧ, ಸಹಕಾರಿ ಇಲಾಖೆ ಮತ್ತು ಲೆಕ್ಕ ಪರಿಶೋಧನಾ ಇಲಾಖೆ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳಲ್ಲಿ  ಸೇವೆ ಸಲ್ಲಿಸಿರುವ ಅವರು 1985ರಲ್ಲಿ ಸಹಾಯಕ ಆಯುಕ್ತರಾಗಿ ಭಡ್ತಿ ಪಡೆದರು. 2011ರಲ್ಲಿ ಭಾರ ತೀಯ ಆಡಳಿತ ಸೇವೆಯ (IAS) ಅಧಿ ಕಾರಿ ಯಾಗಿ ಭಡ್ತಿ ಹೊಂದಿ,
ಬೆಳಗಾಂ, ಕುಂದಾ ಪುರ, ಬಳ್ಳಾರಿ, ಹಾವೇರಿ ಮತ್ತು ಬೆಂಗ ಳೂರಿ ನಲ್ಲಿ ಸಹಾ ಯಕ ಆಯುಕ್ತ ರಾಗಿ ಕೆಲಸ ಮಾಡಿದ ಅನು ಭವ ಹೊಂದಿ ದ್ದಾರೆ. ಮುಖ್ಯ ಮಂತ್ರಿ ಗಳಾದ ಹೆಹ್.ಡಿ. ದೇವೇ ಗೌಡ ಮತ್ತು ಜೆ.ಎಚ್.ಪಟೇ ಲರಿಗೆ ಉಪ ಕಾರ್ಯ ದರ್ಶಿ ಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.. ಎಸ್.ಎಂ.ಕೃಷ್ಣ ಅವರಿಗೆ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ..   ಕೆಪಿಟಿಸಿಎಲ್, ಬಿಎಂಆರ್ ಡಿ, ತೂಕ ಮತ್ತು ಅಳತೆ ಇಲಾಖೆಗಳಲ್ಲೂ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
   ಅಧಿಕಾರ ಸ್ವೀಕ ರಿಸಿದ ಬಳಿಕ ತಮ್ಮನ್ನು ಭೇಟಿ ಯಾದ ಸುದ್ದಿ ಗಾರೊಂದಿಗೆ ಮಾತ ನಾಡಿದ ಜಿಲ್ಲಾಧಿ ಕಾರಿ ಎನ್. ಪ್ರಕಾಶ್ ಅವರು ಆಡಳಿ ತಕ್ಕೆ ಚುರುಕು ಮುಟ್ಟಿ ಸುವುದು ಮತ್ತು  ಸರ ಕಾರಿ ಕಾರ್ಯ ಕ್ರಮ ಗಳನ್ನು ಪರಿ ಣಾಮ ಕಾರಿ ಯಾಗಿ ಜಾರಿ ಗೊಳಿಸಲಾಗುವುದು ತನ್ನ ಆದ್ಯತೆಗಳಲ್ಲಿ ಒಂದಾಗಿದೆ ಎಂದರು.
ಪ್ಲಾಸ್ಟಿಕ್ ನಿಷೇಧ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಇಲ್ಲಿ ಜನರು ವಿದ್ಯಾವಂತರಾಗಿರುವ ಕಾರಣ ಜಾಗೃತಿ ಮೂಡಿಸುವುದು ಸುಲಭ. ಪ್ಲಾಸ್ಟಿಕ್ ನಿಷೇಧದ ಅಭಿಯಾನ ಮುಂದುವರಿಯಲಿದೆ ಮತ್ತು ಇದರ  ಒಟ್ಟಿಗೆ  ಜಾಗೃತಿ ಕಾರ್ಯಕ್ರಮಗಳು ಇರುತ್ತವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ., ಜಿ.ಪಂ.ಸಿಇಒ ಡಾ.ವಿಜಯಪ್ರಕಾಶ್, ಉಪ ವಿಭಾಗಧಿಕಾರಿ ಡಾ. ವೆಂಕಟೇಶ್, ಪಾಲಿಕೆ ಆಯುಕ್ತರಾದ ಡಾ.ಹರೀಶ್  ಕುಮಾರ್ ಅವರು ನೂತನ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ  ವರ್ಗಾವಣೆಗೊಂಡಿರುವ ಡಾ.ಎನ್ ಎಸ್. ಚನ್ನಪ್ಪ ಗೌಡ ಅವರು 15.5.2011ರಂದು  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಜಿಲ್ಲೆಯ  ತೀರ ಹಿಂದುಳಿದ ರಾಷ್ಟ್ರೀಯ ಉದ್ಯಾನ ವನದ ಪ್ರದೇಶದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಜನ ಮನ್ನಣೆಗೆ ಪಾತ್ರರಾದರು.  ಸ್ಥಳಿಯ ನಿವಾಸಿಗಳಾದ ಬುಡಕಟ್ಟು ಜನಾಂಗದಲ್ಲಿ ವಿಶ್ವಾಸ ತುಂಬಲು ಯಶಸ್ವಿಯಾದ ಚನ್ನಪ್ಪ ಗೌಡ; ಅಲ್ಲಿನ ಅರ್ಹರಿಗೆ ಉದ್ಯೋಗ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುನ್ನುಡಿ ಬರೆದವರು. ಅಲ್ಲಿನ  ಗ್ರಾಮಗಳಲ್ಲಿಯೇ ಜನ ಸಂಪರ್ಕ ಸಭೆಗಳನ್ನು ನಡೆಸಿ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ್ದಾರೆ.ಎಂಡೋ ಸಲ್ಫಾನ್ ಬಾಧಿತರಿಗೆ ಪುನರ್ವಸತಿ ಕಲ್ಪಿಸುವಲ್ಲಿಯೂ ಡಾ.ಚನ್ನಪ್ಪ ಗೌಡ ಅವರ ಪಾತ್ರ ಹಿರಿದಾದುದು. ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಅವರು ಪರಿಣಾಮಕಾರಿ ಯೋಜನೆ ರೂಪಿಸಿದ್ದರು.