Saturday, December 29, 2012

ಜೈವಿಕ ಇಂಧನ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಿ: ವೈ ಬಿ ರಾಮಕೃಷ್ಣ

ಮಂಗಳೂರು,ಡಿಸೆಂಬರ್.29:- ಜಿಲ್ಲೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿಗೆ ವಿಫುಲ ಅವಕಾಶವಿದ್ದು, ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳ ಕೋರ್ ಸಮಿತಿ ರಚಿಸಿ ಕ್ರಿಯಾಯೋಜನೆ ರೂಪಿಸಿ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ  ವೈ ಬಿ ರಾಮಕೃಷ್ಣ  ಅವರು ಹೇಳಿದರು.
      ಇಂದು ಜಿಲ್ಲಾ ಪಂಚಾ ಯತ್ ನ ಮಿನಿ ಹಾಲ್ ನಲ್ಲಿ ಆಯೋ ಜಿಸ ಲಾಗಿದ್ದ ಜೈವಿಕ ಇಂಧನ ಕಾರ್ಯ ಕ್ರಮದ ಪ್ರಗತಿ ಪರಿ ಶೀಲನೆ ಸಭೆ ಯನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದ ಅವರು, ಕೃಷಿಕ ರಲ್ಲಿ ಜೈವಿಕ ಇಂಧನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಸುರಹೊನ್ನೆ, ಸರ್ವೇ ಮರ ಬೆಳೆಯುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಹಾಗೂ ಕಡಲಕೊರತೆ ತಡೆಗೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಪಿಡಿಒಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಈ ಸಂಬಂಧ ಮಾಹಿತಿ ಕಾರ್ಯಾಗಾರ ಏರ್ಪಡಿಸಿ ಎಂಬ ಸಲಹೆಯನ್ನೂ ನೀಡಿದರು.
ಮುಂದಿನ ವರ್ಷದ ಕ್ರಿಯಾ ಯೋಜನೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಕಡ್ಡಾಯ ಕಾರ್ಯಕ್ರಮವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯಯೋಜನೆ ರೂಪಿಸುವುದರಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಈ ಸಂಬಂಧ ಆಗಿರುವ ಅಭಿವೃದ್ಧಿಯ ಸ್ಥೂಲ ಪರಿಚಯವನ್ನು ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಸಾಮಾಜಿಕ ಅರಣ್ಯ ಯೋಜನೆಯಡಿ, ಅರಣ್ಯ ಯೋಜನೆಯಡಿ, ಜಲಾನಯನ ಯೋಜನೆಯಡಿ ಈಗಾಗಲೇ 67,000 ಗಿಡಗಳನ್ನು ನೆಡಲಾಗಿದೆ. ಮುಂದಿನ ಸಾಲಿನಲ್ಲಿ ನೆಡಲು 80,000 ಸಸಿಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ವ್ಯವ ಸ್ಥಾಪಕ ನಿರ್ದೇ ಶಕರಾದ  ಎ. ಕೆ ಮೊನ್ನಪ್ಪ ಅವರು ಮಾತ ನಾಡಿ, ಸುರ ಹೊನ್ನೆ ಮತ್ತು ಸರ್ವೇ ಮರ ಗಳು ಇಲ್ಲಿನ ಪ್ರದೇ ಶಕ್ಕೆ ಹೆಚ್ಚು ಸೂಕ್ತ ವಾಗಿವೆ. ರಬ್ಬರ್ ಬೀಜ, ಗೇರು ಹಣ್ಣಿ ನಿಂದಲೂ ಎಣ್ಣೆ ತೆಗೆ ಯಲು ಸಾಧ್ಯ ವಿದ್ದು ಇತರ ಜಿಲ್ಲೆ ಗಳ ರೈತ ರಿಂದ ಜೈವಿಕ ಇಂಧನ ದೊರೆ ಯುವ ಮರ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ, ಇಲ್ಲಿ ಅಧಿ ಕಾರಿ ಗಳು ಮತ್ತು ರೈತರು ಉತ್ತಮ ಸಂವ ಹನದಿಂದ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎಂದರು. ನರೇಗಾದಲ್ಲೂ ಈ ಸಂಬಂಧ ಯೋಜನೆ ರೂಪಿಸಿ ಎಂದು ಸಲಹೆ ಮಾಡಿದರು. ಪ್ರತೀ ಜಿಲ್ಲೆಯಲ್ಲೂ ಈ ಸಂಬಂಧ ಒಂದು ಕಾರ್ಯಯೋಜನೆ ಅಗತ್ಯವಿದೆ ಎಂದರು. ರಾಜ್ಯ ಜೈವಿಕ ಅಭಿವೃದ್ಧಿ ಮಂಡಳಿ ಸದಸ್ಯರಾದ  ಅತ್ತಿಹಳ್ಳಿ ದೇವರಾಜ್, ಯೋಜನಾ ನಿರ್ದೇಶಕರಾದ ಶ್ರೀಮತಿ ಸೀತಮ್ಮ ಅವರು ಉಪಸ್ಥಿತರಿದ್ದರು.