Wednesday, December 19, 2012

ಬಹುಗ್ರಾಮ ಕುಡಿಯುವ ನೀರಿಗೆ ಜಿಲ್ಲೆಗೆ 342 ಕೋಟಿ: ಸಿ ಟಿ ರವಿ

ಮಂಗಳೂರು,ಡಿಸೆಂಬರ್.19: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಗೆ 342 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಆಗಿರುವ ಸಿ.ಟಿ. ರವಿ ಹೇಳಿದ್ದಾರೆ.
ಅವರು ಇಂದು ಉಜಿರೆ ಶ್ರೀ ಶಾರದಾ ಮಂಟಪ ದಲ್ಲಿ ಉಜಿರೆ ಗ್ರಾಮ ಪಂಚಾ ಯತ್ ವತಿ ಯಿಂದ ನಾನಾ ಕಾಮ ಗಾರಿ ಗಳ ಉದ್ಘಾಟನೆ ಹಾಗೂ ದ್ರವ ತ್ಯಾಜ್ಯ ಘಟಕಕ್ಕೆ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡು ತ್ತಿದ್ದರು.
ಬೆಳ್ತಂಗಡಿ ತಾಲೂಕಿನ ಲಾಲ ಹಾಗೂ ನೆರಿಯಾ ಗ್ರಾಮಕ್ಕೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂ ರಾಗಿದೆ. ತಾಲೂಕಿನ 8 ಗ್ರಾಮ ಗಳಿಗೆ ಸುವರ್ಣ ಗ್ರಾಮ ಯೋಜನೆ ಮಂಜೂ ರಾಗಿದ್ದು, ಉಜಿರೆ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆ ಯಲ್ಲಿ2.58 ಕೋಟಿ ರೂ. ಮಂಜೂ ರಾಗಿದೆ. ಅಲ್ಲದೆ ಉಜಿರೆ ಶಾಶ್ವತ ಕುಡಿ ಯುವ ನೀರಿನ ಯೋಜನೆ ಯನ್ನು ರೂಪಿಸಲು ಸಮೀಕ್ಷೆ ನಡೆಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮಾಂ ತರ ಪ್ರದೇ ಶದ ಅಭಿ ವೃದ್ದಿಗೆ ಸರ್ಕಾರ ಅದ್ಯತೆ ನೀಡಿದ್ದು, ಕೃಷಿಕ ರಲ್ಲಿ ವಿಶ್ವಾಸ ತುಂ ಬಲು ಹೆಚ್ಚಿನ ಗಮನ ವನ್ನು ನೀಡ ಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಯಡಿ ತಾಲೂಕಿಗೆ 37 ಕಿ.ಮೀ. ರಸ್ತೆ ಯನ್ನು ಮಂಜೂರು ಮಾಡಿದೆ ಎಂದರು.
ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ವಿಕೇಂದ್ರೀಕೃತ ಪಂಚಾಯತ್ರಾಜ್ ವ್ಯವಸ್ಥೆಯಿಂದ ಅಭಿವೃದ್ಧಿ ಕಾಮಗಾರಿಗಳು ಮನೆಬಾಗಿಲಿಗೆ ತಲುಪುತ್ತಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.  ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೇಟ್ನಾಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ಸದಸ್ಯೆ ಸಿ.ಕೆ. ಚಂದ್ರಕಲಾ, ತಾಲೂಕು ಪಂಚಾಯತ್ ಅಧ್ಯಕ್ಷ ಕೇಶವ ಎಂ., ಸದಸ್ಯೆ ವಿಮಲ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಝೀರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಿ.ಪಿ. ಪುಟ್ಟಸ್ವಾಮಿ, ತಾಲೂಕು ವ್ಯದ್ಯಾಧಿಕಾರಿ ಕಲಾಮಧು,  ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಾಧರ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಶೀಲ ಹೆಗ್ಡೆ ವಂದಿಸಿದರು. ಸದಸ್ಯ ಕೆ. ಬಾಲಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು.