Friday, December 21, 2012

ಸಾಮುದಾಯಿಕ ಪ್ರಜ್ಞೆಗೆ ಕರಾವಳೀ ಉತ್ಸವ ಸಾಕ್ಷಿಯಾಗಲಿ:ಸಿ.ಟಿ.ರವಿ


ಮಂಗಳೂರು,ಡಿಸೆಂಬರ್.22 : ಜನವರಿ 27ರವರೆಗೆ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ  ಸಿ.ಟಿ.ರವಿಯವರು ಇಂದು ಮಂಗಳೂರಿನಲ್ಲಿ  ಚಾಲನೆ ನೀಡಿದರು.
    ನಂತರ ನಡೆದ ಸಮಾ ರಂಭದಲ್ಲಿ  ಮಾತ ನಾಡಿದ ಅವರು  ಕರಾ ವಳಿ ನಗರದ ದಕ್ಷಿಣ ಕನ್ನಡ ಸಾಂಸ್ಕೃ ತಿಕವಾಗಿ ಬಹಳ ಸಿರಿ ವಂತಿ ಕೆಯ ಜಿಲ್ಲೆ. ಇಲ್ಲಿನ ಭಾಷಾ ವೈ ವಿಧ್ಯತೆ ಅನು ಕರಣೀಯ. ಈ ಉತ್ಸವ ಜಿಲ್ಲೆಯ ಸಾಂ ಸ್ಕೃತಿಕ ವೈಭವವನ್ನು ಇನ್ನೂ ಎತ್ತರಕ್ಕೆ ಏರಿಸಲು ಸಹಕಾರಿಯಾಗಲಿ. ಆಧುನಿಕತೆಯ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿರುವ ಜಿಲ್ಲೆಯ ಜೀವನ-ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಲಿ ಎಂದರು.
ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡಿದ ವಿಧಾನ ಸಭಾ ಉಪ ಸಭಾ ಪತಿ ಎನ್.ಯೋಗೀಶ್ ಭಟ್ ಅವರು  ಜಿಲ್ಲೆಯ ಪ್ರವಾ ಸೋದ್ಯಮ ಅಭಿ ವೃದ್ಧಿಗೆ ಪೂರಕ ವಾಗ ಬಲ್ಲ ಸೌಲಭ್ಯ ಗಳು ಕೈ ಗೂಡು ತ್ತಿವೆ. ಸುಲ್ತಾನ್ ಬತ್ತೇರಿ ಯಲ್ಲಿ ಬಹು ನಿರೀ ಕ್ಷಿತ ರೋಪ್ ವೇ ಕಾಮ ಗಾರಿ ಶೀಘ್ರ ಆರಂಭಗೊಳ್ಳಲಿದೆ. ರಂಗಮಂದಿರದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ರೂ.150-200 ಕೋಟಿ ಹೂಡಿಕೆಯ ಗಾಲ್ಫ್ ಕೋರ್ಸ್ ಶೀಘ್ರದಲ್ಲೇ ನಗರಕ್ಕೆ  ಬರಲಿದೆ ಎಂದರು.
ಶಾಸಕರಾದ  ಕೃಷ್ಣ ಜೆ.ಪಾಲೆಮಾರ್, ವಿಧಾನ ಪರಿಷತ್ ಸದಸ್ಯ ಕೆ.ಮೋನಪ್ಪ ಭಂಡಾರಿ, ಮೇಯರ್ ಗುಲ್ಜಾರ್ ಭಾನು, ಉಪ ಮೇಯರ್ ಅಮಿತಕಲಾ, ಮಾಡಾ ಅಧ್ಯಕ್ಷ ಎಸ್.ರಮೇಶ್ ,ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್,  ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್  ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರತಾಪ ರೆಡ್ಡಿ,ಸಹಾಯಕ ಕಮಿಷನರ್ ಡಾ.ವೆಂಕಟೇಶ್ ಸಹಿತ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಎನ್,ಪ್ರಕಾಶ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ವಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾವನೆಗೈದರು.  ಉಪಸ್ಥಿತರಿದ್ದರು.ನಗರದ ಲೇಡಿ ಹಿಲ್  ಕರಾವಳಿ ಉತ್ಸವ ಮೈದಾನ ದಲ್ಲಿ ಸಂಜೆ ಜರು ಗಿದ ವರ್ಣ ರಂಜಿತ ಸಮಾ ರಂಭ ದಲ್ಲಿ  ತುಳು ನಾಡಿನ ಕೊಂಬು, ಕಲ್ಲಡ್ಕದ ಗೊಂಬೆ ಗಳ ನರ್ತನ ಮತ್ತು ಆಕಾಶ ದೆತ್ತ ರಕ್ಕೆ ಚಿಮ್ಮಿದ ಸುಡು ಮದ್ದು ಗಳು ವಿಶೇಷ ಮೆರು ಗನ್ನು ನೀಡಿ ದವು.ಜನವರಿ 27, 2013 ರವರೆಗೆ ಕರಾವಳಿ ಉತ್ಸವದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.