Thursday, December 6, 2012

ಉತ್ತಮ ಪರಿಸರ ನಿರ್ಮಾಣ ಎಲ್ಲರ ಕರ್ತವ್ಯ: ಡಾ ಹರೀಶ್


ಮಂಗಳೂರು. ಡಿಸೆಂಬರ್.06: ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಕರ್ತವ್ಯ ಎಂದು  ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್ ಹೇಳಿದರು.
 ಅವರು ಇಂದು ನಗ ರದ ಅತ್ತಾ ವರ ಸರ ಕಾರಿ ಪ್ರಾಥ ಮಿಕ ಹಾಗು ಪ್ರೌಢ ಶಾಲೆಯ ಆವರ ಣದಲ್ಲಿ ಮಂಗ ಳೂರು ರೋಟರಿ ಪೂರ್ವ ಹಾಗು ಸ್ಥಳೀಯ ಶಾಲಾ ಸಹ ಕಾರ ದೊಂದಿಗೆ ಪಾಸ್ಲಿಕ್ ಬಳಕೆಯ ವಿರುದ್ಧದ ಹಮ್ಮಿಕೊಂಡ ಜಾಗೃತಿ  ಕಾರ್ಯ ಕ್ರಮದ ಸಭೆ ಹಾಗು ಜಾಗೃತಿ ಜಾಥವನ್ನುದ್ದೇಶಿಸಿ ಮಾತನಾಡಿದರು.
ನಮ್ಮಲ್ಲಿ ಇತಿ ಹಾಸ ಪ್ರಜ್ಞೆ ಸಾಕ ಷ್ಟಿದೆ. ಆದರೆ ಆ ಇತಿ ಹಾಸದ ಒಳ್ಳೆಯ ಅಂಶ ಗಳನ್ನು ಅನು ಷ್ಟಾನಕ್ಕೆ ತರು ವಲ್ಲಿ ನಾವು ಎಡ ವಿದ್ದೇವೆ. ಇದು ಅಭಿ ವೃದ್ಧಿಯ ಪರ್ವ ಕಾಲ. ಆದರೆ ಈ ಅಭಿವೃದ್ಧಿಯೊಂದಿಗೆ ಜೀವನದ ಅವಿಭಾಜ್ಯ ಅಂಗವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು ಪರಿಸರದ ಮೇಲೆ ದೂರಗಾಮಿ ದುಷ್ಪರಿಣಾಮ ಬೀರಲಿದೆ.ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದರು.
ಪರಿಸರ ಸಂರ ಕ್ಷಣೆ ನಮ್ಮೆಲ್ಲರ ಹೊಣೆ ಯಾಗಿದೆ ಹಲವು ಜನ ಪರ ಕಾರ್ಯ ಕ್ರಮ ಗಳನ್ನು ಕೇವಲ ಕಾನೂನು ಮೂಲಕ ಅನು ಷ್ಠಾನ ಗೊಳಿಸಿ ಯಶಸ್ಸು ಸಾಧಿ ಸುವುದು ಕಷ್ಟ .ಈ ಸಂದ ರ್ಭದಲ್ಲಿ ಜನರೇ ಪ್ಲಾಸ್ಟಿಕ್ ಬಳಕೆ ಯಿಂದಾ ಗುವ ಹಾನಿ ಯನ್ನು ಮನ ಗಂಡು ಬಳಸುವುದನ್ನು ಕಡಿತಗೊಳಿಸಿದಾಗ ಸಹಜವಾಗಿ ಪ್ಲಾಸ್ಟಿಕ್ ನಿಷೇಧ ಜನರಿಂದಲೇ ಅನುಷ್ಠಾನಗೊಳ್ಳುತ್ತದೆ.ಶತಮಾನದ ಹಿಂದೆ ಜನರು ಪಾಸ್ಟಿಕ್ ಇಲ್ಲದೆ ಬದುಕಿದ್ದಾರೆ.ಹಾಗಿರುವ ಪಾಸ್ಟಿಕ್ ನಿಷೇಧದ ಬಗೆಗಿನ ಬದ್ಧತೆಯನ್ನು ಸಾಮೂಹಿಕವಾಗಿ ಪ್ರದರ್ಶಿಸಬೇಕಾಗಿದೆ .ಪ್ರತಿಯೊಬ್ಬ ನಾಗರೀಕರು ಹೊಣೆಯರಿತು ವರ್ತಿಸುವುದರಿಂದ ಎಲ್ಲರಿಗೂ ಕ್ಷೇಮ .ಇಂದು ಉತ್ಪಾದನೆಯಾಗುತ್ತಿರುವ ಕಸದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇ ನಮಗೆ ಸವಾಲಾಗಿದೆ ಎಂದರು .
ಮಂಗಳೂರು ನಗರವನ್ನು ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿಸಲು ಎಲ್ಲರೂ ಒಟ್ಟಾಗಿ ಪ್ಲಾಸ್ಟಿಕ್ ಬಹಿಷ್ಕರಿಸೋಣ ಎಂದು ಕರೆ ನೀಡಿದರು.
   ಸಮಾ ರಂಭ ದಲ್ಲಿ ಮಂಗ ಳೂರು ರೋಟರಿ ಪೂರ್ವ ಅಧ್ಯಕ್ಷ ಗಜೇಂದ್ರ, ಮನಪಾ ಅಧಿ ಕಾರಿ ಮಧು ಎಸ್ ಮನೋ ಹರ್,ಅತ್ತಾ ವರ ಪ್ರಾಥ ಮಿಕ ಶಾಲಾ ಮುಖ್ಯ ಶಿಕ್ಷಕಿ ಹೇಮಾ ವತಿ,ಪ್ರೌಢ ಶಾಲಾ ವಿಭಾ ಗದ ಮುಖ್ಯ ಶಿಕ್ಷಕಿ ಲಿಲ್ಲಿ ಪಾಯಸ್,ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಸದಾಶಿವ ಶೆಟ್ಟಿ,ಫ್ರಾನ್ಸಿಸ್ ಮೊದಲಾದವರು ಉಪಸ್ಥಿತರಿದ್ದರು.