Friday, December 7, 2012

'ವಿಧಾನಸಭೆ- 60' ಅಪೂರ್ವ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಮಂಗಳೂರು, ಡಿಸೆಂಬರ್.07: ವಾರ್ತಾ ಇಲಾಖೆಯು 'ವಿಧಾನಸಭೆ- 60' ಹೆಸರಿನಲ್ಲಿ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಇಂದಿನಿಂದ ಎರಡು ದಿನಗಳ ಕಾಲ (ಡಿಸೆಂಬರ್ 7 ಮತ್ತು 8)  ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದೆ.
          ಪ್ರದರ್ಶ ನವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ. ಕೆ. ಎನ್. ವಿಜಯ ಪ್ರಕಾಶ್ ಮತ್ತು ಮಂಗ ಳೂರು ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್ ಅವರು ಉದ್ಘಾಟಿಸಿದರು. ಮಂಗಳೂರು ವಿ ವಿ ಪ್ರಾಂಶುಪಾಲರಾದ  ಲಕ್ಷ್ಮೀ ನಾರಾಯಣ್ , ವಾಣಿಜ್ಯ ವಿಭಾಗದ ಪ್ರೊಫೆಸರ್ ಉದಯಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
       ವಿಧಾನ ಸಭೆಗೆ 60 ವರ್ಷ ತುಂಬಿದ ಹಿನ್ನೆಲೆ ಯಲ್ಲಿ ರೂಪಿಸ ಲಾಗಿ ರುವ ಈ ಛಾಯಾ ಚಿತ್ರ ಪ್ರದ ರ್ಶನ ದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಮಜಲು ಗಳು, ಪ್ರಮುಖ ಘಟನೆ ಗಳನ್ನು ಬಿಂಬಿ ಸುವ 250ಕ್ಕೂ ಹೆಚ್ಚು ಚಿತ್ರ ಗಳನ್ನು ಪ್ರದರ್ಶ ನದಲ್ಲಿ ಕಾಣ ಬಹುದು. ಪ್ರದರ್ಶನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ. ವಿಧಾನ ಸಭೆಯ ವಜ್ರ ಮಹೋತ್ಸವ ಸಂದರ್ಭ ದಲ್ಲಿ ವಿಧಾನ ಸೌಧ ದಲ್ಲಿ ಮೊದಲ ಬಾರಿಗೆ ಈ ಛಾಯಾ ಚಿತ್ರ ಪ್ರದ ರ್ಶನ ಏರ್ಪ ಡಿಸ ಲಾಗಿತ್ತು. ಇದಕ್ಕೆ ನಾಗರಿ ಕರಿಂದ ಅಭೂತ ಪೂರ್ವ ಪ್ರತಿ ಕ್ರಿಯೆ ವ್ಯಕ್ತ ವಾದ ಹಿನ್ನೆಲೆ ಯಲ್ಲಿ ಬೆಂಗ ಳೂರಿನ ಚಿತ್ರ ಕಲಾ ಪರಿ ಷತ್ತಿ ನಲ್ಲಿ ಎರ ಡನೇ ಪ್ರದರ್ಶ ನವನ್ನು ನಡೆ ಸಲಾ ಯಿತು.
  ಇತ್ತೀಚೆಗೆ ಬೆಳಗಾವಿಯಲ್ಲಿ ಸುವರ್ಣ ಸೌಧದ ಉದ್ಘಾಟನೆ ಹಾಗೂ ಮೈಸೂರು ದಸರಾ ವೇಳೆಯೂ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದೇ ಸರಣಿಯ ಅಂಗವಾಗಿ ಈ ಅಪರೂಪದ ಛಾಯಾಚಿತ್ರ ಪ್ರದರ್ಶನವು ಮಂಗಳೂರಿನಲ್ಲಿ ನಡೆಯುತ್ತಿದೆ.