Friday, December 14, 2012

'ವನ್ ಎಂಪಿ-ವನ್ ಐಡಿಯಾ'


ಮಂಗಳೂರು, ಡಿಸೆಂಬರ್ 14 :- ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ವಿನೂತನವಾಗಿ ಪರಿಹಾರಗಳನ್ನು, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪ್ರತೀ ಲೋಕಸಭಾ ಕ್ಷೇತ್ರಗಳಲ್ಲಿ ವಾರ್ಷಿಕ ವನ್ ಎಂಪಿ-ವನ್ ಇಂಡಿಯಾ ಸ್ಪರ್ಧೆಯನ್ನು ಏರ್ಪಡಿಸಬೇಕಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಸ್ಪರ್ಧೆ ಏರ್ಪಡಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಶಿಕ್ಷಣ ಮತ್ತು ಕೌಶಲ್ಯ, ಆರೋಗ್ಯ, ನೀರು ಮತ್ತು ನೈರ್ಮಲ್ಯ, ವಸತಿ ಮತ್ತು ಮೂಲಭೂತ ಸೌಕರ್ಯ, ಕೃಷಿ, ಇಂಧನ, ಪರಿಸರ, ಸಮುದಾಯ, ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಅನ್ವೇಷಾಣ್ಮಾತ್ಮಕವಾಗಿ ಪರಿಹಾರಗಳನ್ನು ಸೂಚಿಸುವ ವ್ಯಕ್ತಿಗಳು, ಗುಂಪುಗಳು, ಕೈಗಾರಿಕೆಗಳು, ಅಕಾಡೆಮಿಗಳು, ಸರ್ಕಾರೇತರ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ನಗದು ಬಹುಮಾನವಿದ್ದು ಪ್ರಥಮ 2.5 ಲಕ್ಷರೂ, ದ್ವಿತೀಯ 1.5 ಲಕ್ಷ ಹಾಗೂ ತೃತೀಯ ಬಹುಮಾನ ರೂ. 1ಲಕ್ಷ ಗಳನ್ನು ನೀಡಲಾಗುವುದು. 2013ರ ಜನವರಿ 1ರವರೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಲ್ಲಿಸಬಹುದು ಅಥವಾ ವೆಬ್ ಸೈಟ್ 
www.dk.nic.in ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತದ  ತಿಳಿಸಿದೆ.