Thursday, December 13, 2012

ಕ್ರೀಡೆಯಿಂದ ದೈಹಿಕ ಸಾಮಥ್ರ್ಯ ವೃದ್ಧಿ: ಎನ್.ಪ್ರಕಾಶ್

ಮಂಗಳೂರು, ಡಿಸೆಂಬರ್.13: "ಆರೋಗ್ಯವೇ ಭಾಗ್ಯ '' ಮಾನವ ಆರೋಗ್ಯ ವಂತರಾಗಲು  ಕ್ರೀಡೆಗಳು ಅಗತ್ಯ .ಕ್ರೀಡೆಗಳಿಂದ ಮನುಷ್ಯ ಸರ್ವ ವಿಧದಲ್ಲಿ ಸಮರ್ಥರಾಗಲು ಸಾಧ್ಯ ಎಂದು ದ.ಕ.ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಹೇಳಿದರು.
       ಅವರು ಇಂದು ನಗ ರದ ಪೋಲೀ ಸ್ ಕವಾ ಯತು ಮೈದಾ ನದಲ್ಲಿ ಮಂಗ ಳೂರು ನಗರ ಪೋಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ಸಂಯು ಕ್ತಾಶ್ರ ಯದಲ್ಲಿಏರ್ಪ ಡಿಸಿದ್ದ ವಾರ್ಷಿಕ ಪೋಲೀಸ್ ಕ್ರೀಡಾ ಕೂಟ ವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಆಸ್ತಿಪಾಸ್ತಿಗಳ ರಕ್ಷಣೆ ಮಾಡುವ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ  ಕಾಪಾಡುವ ಪೋಲೀಸರು ಆರೋಗ್ಯವಂತರಾಗಿದ್ದರೆ ಮಾತ್ರ ಅವರಿಂದ ಸಮರ್ಪಕ ಕಾರ್ಯ ನಿರೀಕ್ಷಿಸಲು ಸಾಧ್ಯ ಎಂದ ಜಿಲ್ಲಾಧಿಕಾರಿಗಳು ಪೋಲೀಸರು ಕ್ರೀಡೆಗಳಲ್ಲಿ ಹೆಚ್ಚು ತೊಡಗಲು ತಿಳಿಸಿದರು. ಕ್ರೀಡಾ ಪಟುಗಳ ಪರ ವಾಗಿ ಕೆ.ಎಸ್.ಪ್ರ ಶಾಂತ್ ಪ್ರತಿಜ್ಞೆ ಸ್ವೀಕ ರಿಸಿ ದರು.ಮಂಗ ಳೂರು ನಗರ ಪೋ ಲೀಸ್ ಆಯುಕ್ತ ರಾದ  ಮನೀಷ್  ಕರ್ಬಿ ಕರ್ ಸ್ವಾಗ ತಿಸಿದರು.ಪೋ ಲೀಸ್ ಅಧೀಕ್ಷ ಕರಾದ ಅಭಿ ಷೇಕ್ ಗೋಯಲ್ ವಂದಿ ಸಿದರು.
 ಮಂಗಳೂರು ಉತ್ತರ,ದಕ್ಷಿಣ,ಮಂಗಳೂರು ಪೂರ್ವ ವಲಯ ಮತ್ತು ಪುತ್ತೂರು ಉಪವಿಭಾಗ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲೀಸ್ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.