Wednesday, May 8, 2013

ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಚುನಾವಣೆಯ ಫಲಿತಾಂಶ

ಮಂಗಳೂರು, ಮೇ.08 :-ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 5,2013 ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯಿ ಅಭ್ಯರ್ಥಿಗಳು ಪಡೆದ ಮತಗಳ ವಿವರ.
200  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 74530 ಮತಗಳನ್ನು ಪಡೆದ  ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಭ್ಯರ್ಥಿ ಕೆ. ವಸಂತ ಬಂಗೇರಾರವರು ಚುನಾಯಿತರಾಗಿರುತ್ತಾರೆ. ಇವರ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ರಂಜನ್ ಜಿ.ಗೌಡ ಅವರು 58,789 ಮತಗಳನ್ನು ಗಳಿಸಿದ್ದಾರೆ.
201 ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ಕೆ.ಅಭಯಚಂದ್ರ ಇವರು 53180   ಮತಗಳನ್ನು                  ಪಡೆದು  ಚುನಾಯಿತರಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಬಿಜೆಪಿಯ ಉಮಾನಾಥ ಕೋಟ್ಯಾನ್ 48,630 ಮತಗಳನ್ನು ಪಡೆದಿರುತ್ತಾರೆ.
202 ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊಯಿದ್ದಿನ್  ಬಾವಾ ಅವರು 69,897   ಮತಗಳನ್ನು  ಪಡೆದು  ಜಯಶಾಲಿಯಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಕೃಷ್ಣ ಜೆ.ಪಾಲೇಮಾರ್ ರವರು 64,524 ಮತಗಳನ್ನು ಪಡೆದಿರುತ್ತಾರೆ.
203 ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ರವರು 67,829   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಎನ್.ಯೋಗೀಶ್ ಭಟ್ ಇವರು 55554 ಮತಗಳನ್ನು ಪಡೆದಿರುತ್ತಾರೆ.
204 ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯು.ಟಿ.ಖಾದರ್ 69,450   ಮತಗಳನ್ನು ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ  ಸ್ಪರ್ಧಿ ಚಂದ್ರಹಾಸ ಉಳ್ಳಾಲ  40,339 ಮತಗಳನ್ನು ಪಡೆದಿರುತ್ತಾರೆ.
205 ಬಂಟ್ವಾಳ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈಯವರು 81,655  ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ರಾಜೇಶ್ ನಾಯಕ್ ಉಳ್ಳಿಪ್ಪಾಡಿ ಇವರು 63815 ಮತಗಳನ್ನು ಪಡೆದಿರುತ್ತಾರೆ.
206 ಪುತ್ತೂರು ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಟಿ.ಶೆಟ್ಟಿ ರವರು 66,345   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಸಂಜೀವ ಮಟಂದೂರು ಇವರು 62056 ಮತಗಳನ್ನು ಪಡೆದಿರುತ್ತಾರೆ.
207 ಸುಳ್ಯ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಅಂಗಾರ .ಎಸ್.ರವರು 65,913   ಮತಗಳನ್ನು         ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಡಾ..ರಘು ಇವರು 64,540 ಮತಗಳನ್ನು ಪಡೆದಿರುತ್ತಾರೆ.