Thursday, May 2, 2013

ಸ್ವಯಂಪ್ರೇರಿತರಾಗಿ ಮತದಾನ ಮಾಡಿ: ಸಿಇಓ

ಮಂಗಳೂರು, ಮೇ.02 :ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ; ತಪ್ಪದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರು ಬುಧ ವಾರ  ಸಂಜೆ ನಗ ರದ ಬಂದರು ಮೀನು ಗಾರಿಕಾ ದಕ್ಕೆ ಯಲ್ಲಿ ಮೀನು ಗಾರ ರನ್ನು ಗಮನ ದಲ್ಲಿ ರಿಸಿ ಆಯೋ ಜಿಸ ಲಾದ ಮತ ದಾರರ ಜಾಗೃತಿ ಮತ್ತು ಶಿಕ್ಷಣ ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು.
ನೂರಾರು ಮೀನುಗಾರ ಬಂಧುಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮತದಾನ ಮಾಡುವ ಬಗ್ಗೆ ಹಾಗೂ ಇತರರಿಗೆ  ಮತದಾನ ಮಾಡುವಂತೆ ಮನವೊಲಿಸುವ ಪ್ರಮಾಣವಚನ ಬೋಧಿಸಲಾಯಿತು. ನಿನ್ನೆಯಿಂದ ಐದು ದಿನಗಳ ಕಾಲ 'ವೋಟ್ ಮಿ' ಎಂಬ ಸಂದೇಶದೊಂದಿಗೆ ದೋಣಿ ಸಮುದ್ರದಲ್ಲಿ ಸಂಚರಿಸಲಿದೆ.
ಮೀನು ಗಾರರ ಬದುಕೇ ಸವಾಲು ಗಳಿಂ ದೊಡ ಗೂಡಿದ ಸಾಹ ಸದ ಬದುಕು. ಮೀನು ಗಾರ ರೆಲ್ಲರೂ ನೈತಿಕ ಮತ ದಾನಕ್ಕೆ ಆದ್ಯತೆ ನೀಡಿ ಮೇ ಐದ ರಂದು ನಡೆ ಯಲಿ ರುವ ಮತ ದಾನ ಪ್ರ ಕ್ರಿಯೆ ಯಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶ ನೀಡಿದರು.
ಸಭೆ ಯಲ್ಲಿ ಯತೀಶ್ ಬೈ ಕಂಪಾಡಿ, ಹರೀ ಶ್ಚಂದ್ರ ಪುತ್ರನ್, ಅಬ್ದುಲ್  ರೆಹ ಮಾನ್, ಯೂತ್ ಕ್ಲಬ್ ನ ಚೇತನ್ ಬೆಂಗ್ರೆ, ಮೀನು ಗಾರಿಕಾ ಇಲಾಖೆ ಉಪ ನಿರ್ದೇ ಶಕ ರಾದ ಸುರೇಶ್ ಕುಮಾರ್, ಸಹಾ ಯಕ ನಿರ್ದೇ ಶಕ ರಾದ ಪಾಶ್ರ್ವ ನಾಥ್ ಮುಂತಾದವರು ಭಾಗವಹಿಸಿದ್ದರು.