Friday, May 17, 2013

ಜಿಲ್ಲೆಯಲ್ಲಿ ಮಾನವರಿಂದ ಶೌಚ ಸ್ವಚ್ಚತೆ ತಡೆಯಿರಿ- ಅಪರ ಜಿಲ್ಲಾಧಿಕಾರಿ

ಮಂಗಳೂರು,ಮೇ.17:ಅಮಾನವೀಯವಾದ ಮಾನವ ಶೌಚವನ್ನು ಕೈಯಿಂದ
ಶುಚಿಗೊಳಿಸುವ (manual scavenging) ರ ಪದ್ದತಿಯನ್ನು ನಿರ್ಮೂಲ ಮಾಡಬೇಕೆಂದು ದ.ಕ.ಜಿಲ್ಲಾ ಹೆಚ್ಚುವರಿ ಜಿಲ್ಲ್ಲಾಧಿಕಾರಿ ದಯಾನಂದ ಅವರು ತಿಳಿಸಿದ್ದಾರೆ.
     ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಂಗಳೂರು ಮಹಾನಗರಪಾಲಿಕೆ ಬಂಟ್ವಾಳ,ಉಳ್ಳಾಲ  ಮತ್ತು ಪುತ್ತೂರು ಪುರಸಭೆಗಳ ಎನ್ಯುಮರೇಟರ್ಸ್,ಸೂಪರ್ ವೈಸರ್ಸ್ ಹಾಗೂ ಅಪರೇಟರ್ ಗಳಿಗೆ  (manual scavengingರ ಕುರಿತು ನಡೆದ ಒಂದು ದಿನದ ತರಬೇತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಮೇಲ್ಕಂಡ ಪುರಸಭೆಗಳಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯಗಳನ್ನು  ಮಾನವರಿಂದ ಸ್ವಚ್ಛಗೊಳಿಸುತ್ತಿರುವ ಬಗ್ಗೆ ಇತ್ತೀಚಿನ ಸರ್ವೆಯಿಂದ ದೃಢಪಟ್ಟಿರುವುದರಿಂದ ಈ ಭಾಗಗಳಲ್ಲಿ ಎನ್ಯೂಮರೇಟರ್ಸ್ ಗಳು ಸರ್ವೆ ಮಾಡಿ ಅಂತಹವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಹಾಗೂ ಜನರಲ್ಲಿ ಇಂತಹ ಪದ್ದತಿಯನ್ನು ನಿರ್ಮೂಲನೆಗೊಳಿಸಲು ಜಾಗೃತಿ ಮೂಡಿಸುವಂತೆ ತಿಳಿಸಿದರು.
ಯೋಜನಾ ನಿರ್ದೇಶಕರಾದ ತಾಕತ್ ರಾವ್, ಸಮಾಜ ಕಲ್ಯಾಣಾಧಿಕಾರಿ ಅರುಣ್ ಪುರ್ಟಡೋ ಇತರರು ಹಾಜರಿದ್ದರು.