Friday, May 17, 2013

ಜಿಲ್ಲೆಯಲ್ಲಿ 2.41 ಲಕ್ಷ ಜನರಿಂದ ಆಧಾರ್ ನೋಂದಣಿ

ಮಂಗಳೂರು, ಮೇ. 17: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗುರುತಿನ ಚೀಟಿ ನೋಂದಣಿ ಕಾರ್ಯ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು,ಮೂಡಬಿದ್ರಿ,ಬಂಟ್ವಾಳ,ವಿಟ್ಲ, ಮತ್ತು ಪುತ್ತೂರುಗಳಲ್ಲಿ 2012 ರ ಡಿಸೆಂಬರ್ ನಿಂದ ಕಾರ್ಯಾರಂಭವಾಗಿದ್ದು,ಇಲ್ಲಿಯ ತನಕ 16 ಕೇಂದ್ರಗಳಲ್ಲಿ ಒಟ್ಟು 2,41,809 ಜನ ತಮ್ಮ ಹೆಸರನ್ನು ಹಾಗೂ ವೈಯಕ್ತಿಕ ಮಾಹಿತಿಯನ್ನು ಆಧಾರ  ಕಾರ್ಡ್  ಪಡೆಯಲು ನೊಂದಾಯಿಸಿಕೊಂಡಿದ್ದಾರೆ.