ಮಂಗಳೂರು, ಮೇ. 17: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗುರುತಿನ ಚೀಟಿ ನೋಂದಣಿ
ಕಾರ್ಯ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು,ಮೂಡಬಿದ್ರಿ,ಬಂಟ್ವಾಳ,ವಿಟ್ಲ, ಮತ್ತು
ಪುತ್ತೂರುಗಳಲ್ಲಿ 2012 ರ ಡಿಸೆಂಬರ್ ನಿಂದ ಕಾರ್ಯಾರಂಭವಾಗಿದ್ದು,ಇಲ್ಲಿಯ ತನಕ 16
ಕೇಂದ್ರಗಳಲ್ಲಿ ಒಟ್ಟು 2,41,809 ಜನ ತಮ್ಮ ಹೆಸರನ್ನು ಹಾಗೂ ವೈಯಕ್ತಿಕ ಮಾಹಿತಿಯನ್ನು
ಆಧಾರ ಕಾರ್ಡ್ ಪಡೆಯಲು ನೊಂದಾಯಿಸಿಕೊಂಡಿದ್ದಾರೆ.