Tuesday, May 7, 2013

ಮತ ಎಣಿಕೆಗೆ ಸಜ್ಜು- ಜಿಲ್ಲಾಧಿಕಾರಿ

ಮಂಗಳೂರು, ಮೇ.07 :ಮತ ಎಣಿಕೆ ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು,ಇಂದು ಈ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್(ಅಣುಕು ಪ್ರದರ್ಶನ)ಸಹ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆನರಾ ಕಾಲೇಜಿನಲ್ಲಿ ನಡೆಯಿತು. ಚುನಾವಣಾ ಮಾಹಿತಿಯನ್ನು ಪಬ್ಲಿಕ್ ಎಡ್ರೆಸ್ ವ್ಯವಸ್ಥೆ ಮೂಲಕ (ಮೈಕ್ ) ಸಾರ್ವಜನಿಕರಿಗೆ ತಿಳಿಸಲಾಗುವುದೆಂದು ಅವರು ತಿಳಿಸಿದರು.
           ಮತ ಎಣಿಕಾ ಕೇಂದ್ರ ದಲ್ಲಿ ಮೊಬೈಲ್ ಫೋನ್ ಗಳ ಬಳಕೆಗೆ  ಚುನಾ ವಣಾ ಅಧಿ ಕಾರಿ ಗಳು,  ವೀಕ್ಷ ಕರು, ಜಿಲ್ಲಾ ಚುನಾ ವಣಾ ಅಧಿ ಕಾರಿ ಗಳಿಂದ ಅನು ಮತಿ ಪಡೆದ ವರಿಗೆ ಮಾತ್ರ ಅವ ಕಾಶ ವಿರು ತ್ತದೆ.
ಮಾದ್ಯಮ ಪ್ರತಿ ನಿಧಿಗಳು ಮೊಬೈಲ್ ಫೋನ್ ಗಳನ್ನು ಮಾದ್ಯಮ ಕೊಠಡಿ ಯಲ್ಲಿ ಮಾತ್ರ ಬಳಸ ಬಹುದಾ ಗಿದೆ. ಎಣಿಕಾ ಕೇಂದ್ರದ ಆವ ರಣ ಗಳಲ್ಲಿ ಯಾರೂ ಮೊಬೈಲ್ ಫೋನ್ ಗಳನ್ನು ಕೊಂಡೊ ಯ್ಯಬಾ ರದೆಂದು ಹಾಗೂ ಮೊಬೈಲ್ ಫೋನ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ  ಹರ್ಷಗುಪ್ತ ಇವರು ತಿಳಿಸಿರುತ್ತಾರೆ.
ಎಣಿಕಾ ಕೇಂದ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಎಣಿಕಾ  ಒಬ್ಬ ಏಜೆಂಟ್ ಮಾತ್ರ  ಮೊಬೈಲ್  ಫೋನ್ನ್ನು  ಕೊಂಡೊಯ್ಯಲು ಅವಕಾಶವಿದ್ದು ಅವರು ಅವುಗಳ ಬಳಕೆಯನ್ನು ತಮಗೆ ಮೀಸಲಾದ ಕೊಠಡಿಯಲ್ಲಿ ಮಾತ್ರ ಮಾಡಬಹುದಾಗಿದೆ. ಅನಾವಶ್ಯಕವಾಗಿ ಎಣಿಕಾ ಕೇಂದ್ರದ ಅಂಗಳದಲ್ಲಿ( ಕಾರಿಡಾರ್) ಅತ್ತಿಂದತ್ತ ಓಡಾಡುವುದನ್ನು ಫೋನ್ನಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ.
ಚುನಾವಣಾ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಂದರೆ ಮತಯಂತ್ರವನ್ನು ಸ್ಟ್ರಾಂಗ್ ರೂಮಿನಿಂದ ಎಣಿಕಾ ಕೊಠಡಿಗೆ ಸಾಗಿಸುವುದು ಅದನ್ನು ತೆರೆಯುವುದು ಎಣಿಕೆ ಮಾಡುವುದು ಇನ್ನಿತರೆ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಕ್ಯಾಮರಾ ಮೂಲಕ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
ಅಂಚೆ ಮತಪತ್ರಗಳ ಎಣಿಕೆಯ ಬಗ್ಗೆ ಚುನಾವಣಾಧಿಕಾರಿ ಸಹಾಯಕ ಚುನಾವಣಾಧಿಕಾರಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿದ್ದು, ಅವರ ನಿರ್ಧಾರವೇ ಅಂತಿಮವಾಗಿರುತ್ತದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ನಿಷೇದಾಜ್ಞೆ ಜಾರಿ :
  ರಾಜ್ಯ ವಿಧಾನ ಸಭಾ ಚುನಾವಣೆ - 2013 ರಂದು ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿರುವ  ಮತ ಎಣಿಕೆ ನಂತರ ಫಲಿತಾಂಶದಲ್ಲಿ ವಿಜಯಿಯಾದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಮ್ಮ ಕ್ಷೇತ್ರಗಳೆಡೆಗೆ ತಮ್ಮ ವಿಜಯೋತ್ಸವ ಆಚರಿಸುತ್ತಾ ಮೆರವಣಿಗೆಯಲ್ಲಿ ತೆರಳುತ್ತಾರೆ.ಸಾರ್ವಜನಿಕ ಹಿತದೃಷ್ಟಿಯಿಂದ ವಿಜಯೋತ್ಸವ ಮೆರವಣಿಗೆಯನ್ನು ಪ್ರತಿಬಂಧಿಸುವ ಸಲುವಾಗಿ  ದಿನಾಂಕ 8-5-13 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 11-5-13 ರಂದು ಬೆಳಿಗ್ಗೆ 6.00 ಗಂಟೆಯ  ವರೆಗೆ ಯಾವುದೇ ಸಭೆ ಸಮಾರಂಭ ಮತ್ತು ಪ್ರತಿಭಟನಾ ಮೆರವಣಿಗೆಯನ್ನು ನಡೆಸದಂತೆ ನಿಷೇದಾಜ್ಞೆಯನ್ನು  ಪೋಲೀಸ್ ಆಯುಕ್ತರು ಹಾಗೂ ಎಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್  ಮನೀಷ್ ಖರ್ಬಿಕರ್ ಘೋಷಿಸಿರುತ್ತಾರೆ.
 ವಾಹನ ಸಂಚಾರದಲ್ಲಿ ಬದಲಾವಣೆ:
ರಾಜ್ಯ ವಿಧಾನ ಸಭಾ ಚುನಾವಣೆ  -2013  ಮತ ಎಣಿಕೆದಿನಾಂಕ 8-5-13 ರಂದು ಬೆಳಿಗ್ಗೆ 7.00 ಗಂಟೆಯಿಂದ ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಮತ ಎಣಿಕಾ ಕೇಂದ್ರದ ಸುತ್ತಮುತ್ತ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಸಂಚಾರ ವ್ಯವಸ್ಥೆಯನ್ನು ಮಾಡಿ ಪೋಲೀಸ್ ಆಯುಕ್ತರು ಆದೇಶಿಸಿರುತ್ತಾರೆ.ಜೈಲ್ ಜಂಕ್ಷನ್ ಕಡೆಯಿಂದ ಬೆಸೆಂಟ್ ಜಂಕ್ಷನ್ ಕಡೆಯಿಂದ, ಕೆನರಾ ಕಾಲೇಜು ಕಡೆಗೆ ಚುನಾವಣೆ ಅಧಿಕಾರಿಯವರ ಹಾಗೂ ಪೋಲೀಸ್ ಅಧಿಕಾರಿಗಳ ವಾಹನ ಹೊರತು ಪಡಿಸಿ ಇತರೆ ವಾಹನಗಳ ಪ್ರವೇಶ ನಿಷೇಧಿಸಿದೆ.
ಪಿವಿಎಸ್ ನಿಂದ ಬಳ್ಳಾಲ್ ಭಾಗ್ ತನಕ ರಸ್ತೆಯ ಎರಡೂ ಬದಿ ಯಲ್ಲಿ ಯಾವುದೇ ತೆರ ನಾದ ವಾಹನ ನಿಲು ಗಡೆ ಯನ್ನು ಕಡ್ಡಾಯ ವಾಗಿ ನಿಷೇ ಧಿಸಿದೆ. ಕಪು ಚಿನ್ ಪ್ರಾದ್ ಹಾಗೂ ಕ ರಂಗಲ್ ಪಾಡಿ ಕಡೆ ಯಿಂದ ಜೈಲು ಜಂಕ್ಷನ್ ಕಡೆಗೆ ಎಲ್ಲಾ ತೆರ ನಾದ ವಾಹನ ಸಂಚಾರ ನಿಷೇ ಧಿಸಿದೆ. ಜೈಲ್ ಜಂಕ್ಷನ್ ನಿಂದ ಕೋರಿರೊಟ್ಟಿ ಕ್ರಾಸ್ ರಸ್ತೆ ವಾಣಿಜ್ಯ ಕಟ್ಟಡ ಗಳ ಪಾರ್ಕಿಂ ಗ್ ಹೊರತು ಪಡಿಸಿ ರಸ್ತೆ ಯಲ್ಲಿ ಯಾವುದೇ ವಾಹನ ನಿಲು ಗಡೆಗೆ ಅವ ಕಾಶವಿ ರುವು ದಿಲ್ಲ. ಜೈಲು ಜಂಕ್ಷನ್ ನಿಂದ ವೆಟರ್ನರಿ ಜಂಕ್ಷನ್ ತನಕ ರಸ್ತೆಯ ಎಡಬದಿಯಲ್ಲಿ ಮಾತ್ರ ವಾಹನಗಳನ್ನು ರಸ್ತೆಗೆ ಸಮಾನಾಂತರವಾಗಿ ಪಾರ್ಕ್ ಮಾಡಬಹುದಾಗಿದೆ. ಈ ಆದೇಶದನ್ವಯ ಸದರಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಆವಶ್ಯವರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕ ಗೊಳಿಸಲು ಸಹಾಯಕ ಪೋಲೀಸ್ ಆಯುಕ್ತರು ಅಧಿಕಾರವುಳ್ಳವರಾಗಿರುತ್ತಾರೆ. .