Tuesday, November 6, 2012

ವಿಪತ್ತು ನಿರ್ವಹಣೆ ಭಾರತೀಯರು ಸ್ಪಂದಿಸುವ ರೀತಿ ವಿಭಿನ್ನ

ಮಂಗಳೂರು, ನವೆಂಬರ್.06 : ವಿಪತ್ತುಗಳು ಸಂಭವಿಸಿದ ಸಂದರ್ಭವನ್ನು ರಚನಾತ್ಮಕವಾಗಿ ಹಾಗೂ ಯೋಜನಾತ್ಮಕವಾಗಿ ಎದುರಿಸಲು ನಮ್ಮ ಯೋಜನೆಗಳಿನ್ನೂ ಶೈಶಾವವಸ್ಥೆಯಲ್ಲಿದ್ದರೂ, ಭಾವನಾತ್ಮಕವಾಗಿ ನಮ್ಮವರೂ ಸ್ಪಂದಿಸುವ ರೀತಿ ಅತ್ಯದ್ಭುತ ಎಂದು ರಾಜ್ಯ ವಿಕೋಪ ನಿರ್ವಹಣೆಯ ಯೋಜನಾ ನಿರ್ದೇಶಕರಾದ ಡಾ. ಮಹೇಂದ್ರ ರಾಜಾರಾಂ ಅವರು ಹೇಳಿದರು.
   ವಿಕೋ ಪಗಳು ಸಂಭವಿ ಸಿದಾಗ, ಜಿಲ್ಲಾ ಡಳಿತ ಹಾಗೂ ಸ್ಥಳೀ ಯರು ಒಗ್ಗಟ್ಟಿ ನಿಂದ ನಿರ್ವ ಹಿಸುವ ರೀತಿ ಬೇರೆಲ್ಲ ದೇಶ ಗಳಿ ಗಿಂತ ಭಿನ್ನ. ಯೋಜನೆ ರೂಪಿ ಸುವಲ್ಲಿ ನಾವಿನ್ನೂ ಪ್ರಥಮ ಹಂತ ದಲ್ಲಿ ದ್ದರೂ, ಅವ ಘಡಗಳ ಸಂದ ರ್ಭದಲ್ಲಿ ಕಾರ್ಯೋ ನ್ಮುಖ ವಾಗುವ ರೀತಿ ಮಾದರಿ ಯಾಗಿ ರುತ್ತದೆ ಎಂದರು.ನಿನ್ನೆ ಯಿಂದ ಮಂಗ ಳೂರು ಮಹಾ ನಗರ ಪಾಲಿಕೆ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಗೃಹಸಚಿವಾಲಯ ದೆಹಲಿ ಆಯೋಜಿಸಿರುವ ಕಾಯರ್ಾಗಾರದ ಎರಡನೇ ದಿನ ಗುಂಪು ಚಟುವಟಿಕೆ ಮತ್ತು ಚರ್ಚೆಯ ವೇಳೆ ಮೇಲ್ಕಂಡ ಅಭಿಪ್ರಾಯ ವ್ಯಕ್ತವಾಯಿತು.
  ಯಾವುದೇ ಸಂದರ್ಭಗಳಿರಲಿ ವಿವಿಧ  ಇಲಾಖೆಗಳ ನಡುವೆ ಸಮನ್ವಯ  ಮತ್ತು ಮಾಹಿತಿ ವಿನಿಮಯಗಳು ಸುಸೂತ್ರವಾಗಿದ್ದರೆ  ಒಂದು ಹಂತದವರೆಗೆ ನಾವು ಯಶಸ್ವಿಯಾದಂತೆ. ಇಂತಹ ಸಂದರ್ಭಗಳಲ್ಲಿ ನೆರವಿಗೆ ಧಾವಿಸುವವರು ಜಿಲ್ಲಾಡಳಿತದಿಂದಾಗಲೀ ಸ್ಥಳೀಯರಿಂದಾಗಲೀ ಯಾವುದೇ ನೆರವು ಬಯಸದಿರುವುದು ಕಾರ್ಯಾಚರಣೆಯನ್ನು ಇನ್ನಷ್ಟು ಸುಲಲಿತಗೊಳಿಸುತ್ತದೆ ಎಂಬ ಅಭಿಪ್ರಾಯವೂ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.
   ಮಂಗಳೂರು ನಗರ ಪೆಟ್ರೊ ಕೆಮಿಕಲ್ ಝೋನ್ ನಿಂದಾಗಿ ಹೆಚ್ಚಿನ ಮುನ್ನೆ ಚ್ಚರಿಕೆ ವಹಿಸ ಬೇಕಿದೆ. ನೈ ಸರ್ಗಿಕ ಅಥವಾ ಮಾನವ ಕಾರಣ ದಿಂದಾ ಗುವ ವಿಪತ್ತು ಉಂಟಾ ದಲ್ಲಿ ತೆಗೆದು ಕೊಳ್ಳ ಬೇಕಾದ ತುರ್ತು ಕಾರ್ಯ ಗಳ ಕುರಿತು ಸು ದೀರ್ಘ ವಾಗಿ ವಿವ ರಿಸಿದ ದೆಹಲಿ ಯ ಪ್ರೊ. ರಾಜೇಶ್ ಭಾಟೀಯಾ ಅವರು, ವಿಪತ್ತು ನಿರ್ವಹಣೆಯ ಜವಾಬ್ದಾರಿ ಹಂಚಿಕೆ,ಕರ್ತವ್ಯಗಳು,ವಿಪತ್ತು ನಿರ್ವಹಣೆ ಮಾಹಿತಿಯನ್ನು ಮಾಧ್ಯಮಗಳಿಗೆ ಒದಗಿಸುವುದು,ವಿಪತ್ತಿಗೊಳಗಾದವರಿಗೆ ತುರ್ತು ಚಿಕಿತ್ಸೆ ತೆಗೆದುಕೊಳ್ಳಬೇಕಾದ ತುರ್ತು ಕಾರ್ಯಗಳು ಸೇರಿದಂತೆ ಆಹಾರ, ಸಂಚಾರ,ಸಂವಹನ ಕುರಿತು ಸವಿವರ ಮಾಹಿತಿ ನೀಡಿದರು.
    ಸಂಪನ್ಮೂಲ ವ್ಯಕ್ತಿಗಳಾಗಿ ಜೊತೆಗಿರುವ ಸುಧೀರ್ ರಾಥೋಡ್ ಅವರು , ಅವರು ವಿಪತ್ತು ನಿರ್ವಹಣೆಯಲ್ಲಿ ಸಮೂಹ ಚರ್ಚೆ ಹಾಗೂ ಸಮೂಹ ಕಸರತ್ತುಗಳ ಕುರಿತು ವಿವರಿಸಿದರು.ಸಣ್ಣ ಅಪಘಾತ ದೊಡ್ಡ ವಿಪತ್ತಾಗುವುದು ಹೇಗೆ ಎಂಬುದನ್ನು ವಿವರಿಸಿದರು.
     ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ. ದಯಾನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಓ.ಶ್ರೀರಂಗಪ್ಪ,  ಆಹಾರ ಮತ್ತು ನಾಗರೀಕ ಇಲಾಖೆ ಉಪನಿರ್ದೇಶಕರಾದ ಶರಣ ಬಸಪ್ಪ, ಸಹಾಯಕ ಆಯುಕ್ತರಾದ ಡಾ ವೆಂಕಟೇಶ್, ಪುತ್ತೂರು ವಿಭಾಗದ ಸಹಾಯಕ ಆಯುಕ್ತರಾದ ಪ್ರಸನ್ನ, ತಹಸೀಲ್ದಾರ್ ರವಿಚಂದ್ರ ನಾಯಕ್, ಅವರನ್ನೊಳಗೊಂಡಂತೆ ವಿವಿಧ ಇಲಾಖೆಗಳ ಹಲವು ಅಧಿಕಾರಿಗಳು ಪಾಲ್ಗೊಂಡರು.