Tuesday, November 20, 2012

ಮಂಗಳೂರಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2012 ಸಮಾರೋಪ

ಮಂಗಳೂರು, ನವೆಂಬರ್.20: ಸಾರ್ವಜನಿಕ ಗ್ರಂಥಾಲಯ ಇಲಾಖೆ,ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಮಂಗಳೂರು ಇವರ ಸಹಕಾರದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2012 ಸಮಾರೋಪ ಸಮಾರಂಭ ಹಾಗೂ ಸಿಬ್ಬಂದಿ ಸೇವಾ ಪುರಸ್ಕಾರ ಸಮಾರಂಭ  ಇಂದು ಮಂಗಳೂರಿನಲ್ಲಿ ನಡೆಯಿತು. ನಗರದ ಮಿಲಾ ಗ್ರಿಸ್ ಜುಬಿಲಿ  ಹಾಲ್ ನಲ್ಲಿ ಆಯೋ ಜಿಸಿದ್ದ ಸಪ್ತಾಹ ಸಮಾ ರೋಪ ಸಮಾ ರಂಭದ ಉದ್ಘಾ ಟನೆ ಯನ್ನು  ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೆರ ವೇರಿ ಸಿದರು.ಸಾಹಿತಿ ಹಾಗೂ ರಾಜ್ಯ ಗ್ರಂಥಾ ಲಯ ಪ್ರಾಧಿ ಕಾರದ ಸದಸ್ಯ ರಾದ ಶೂದ್ರ ಶ್ರೀನಿ ವಾಸ್ ಅವರು ಆಶಯ ಭಾಷಣ ಮಾಡಿ ದರು. ಕೆ.ಟಿ. ಗಟ್ಟಿ ಅವರು ವಿಶೇಷ ಉಪ ನ್ಯಾಸ ನೀಡಿದರು. ಶಾಸಕ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಅಧ್ಯ ಕ್ಷತೆ ವಹಿಸಿ ದ್ದರು, ಜಿಲ್ಲಾ ಧಿಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ, ಮೂಡದ ಅಧ್ಯಕ್ಷ ಎಸ್. ರಮೇಶ್ ,ಜಿಲ್ಲಾ ಪಂಚಾ ಯತ್ ಸಿಇಓ ಡಾ. ವಿಜಯ ಪ್ರಕಾಶ್,ಸಾರ್ವ ಜನಿಕ ಗ್ರಂಥಾ ಲಯ, ಬೆಂಗ ಳೂರು ಇದರ ನಿರ್ದೇ ಶಕ ರಾದ  ಎಂ.ಎಂ.ಬಡ್ನಿ ಮತ್ತಿತರ ಗಣ್ಯರು ಸಮಾ ರೋಪ ಸಮಾ ರಂಭದಲ್ಲಿ ಪಾಲ್ಗೊಂಡಿದ್ದರು.