Monday, November 5, 2012

ವಿಕೋಪ ನಿರ್ವಹಣೆಯಲ್ಲಿ ಸ್ಥಳೀಯ ತೀರ್ಮಾನಗಳೇ ಮುಖ್ಯ: ಐಜಿಪಿ

ಮಂಗಳೂರು,ನವೆಂಬರ್.05 : ವಿಕೋಪ ನಿರ್ವಹಣೆಯಲ್ಲಿ ಸ್ಥಳೀಯ ಅಧಿಕಾರಿಗಳ ಪಾತ್ರ ಹಾಗೂ ನಿರ್ಧಾರ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಹೇಳಿದರು.
ಇಂದು ಮಹಾ ನಗರ ಪಾಲಿ ಕೆಯ ಮಂಗಳಾ ಕೌನ್ಸಿಲ್ ಹಾಲ್ ನಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯ ಅಧಿಕಾ ರಿಗಳಿಗೆ ಆಯೋಜಿ ಸಲಾ ಗಿದ್ದ ಐದು ದಿನ ಗಳ ವಿಕೋಪ ನಿರ್ವ ಹಣೆ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಅವರು ಮಾತ ನಾಡು ತ್ತಿದ್ದರು. ಕಾರ್ಯಾ ಗಾರ ವನ್ನು ವಿಕೋಪ ನಿರ್ವಹಣೆ ರಾಷ್ಟ್ರೀಯ ಸಂಸ್ಥೆ ನವದೆಹಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಜಂಟಿಯಾಗಿ ಆಯೋಜಿಸಿದೆ.
ತಮ್ಮ ಕಾರ್ಯಾವಧಿಯಲ್ಲಿ ಎದುರಿಸಿರುವ ವಿಕೋಪಗಳ ನಿರ್ವಹಣೆಯ ಅನುಭವಗಳನ್ನು ಹಂಚಿಕೊಂಡ ಅವರು, ಜನಸಾಮಾನ್ಯರು ಎಲ್ಲಾ ಸಂದರ್ಭಗಳಲ್ಲಿಯೂ 100ಕ್ಕೆ ಫೋನ್ ಮಾಡಿದರೂ, ಎಲ್ಲ ಸಂದರ್ಭಗಳನ್ನು ಪೊಲೀಸರಿಂದ ಮಾತ್ರ ನಿಭಾಯಿಸಲು ಕಷ್ಟ ಸಾಧ್ಯ. ಹಾಗಾಗಿ ಸ್ಥಳೀಯ ಅಧಿಕಾರಿಗಳ ನಡುವೆ ಸಮನ್ವಯ ಮತ್ತು ಮಾಹಿತಿ ವಿನಿಮಯ ಅತೀ ಅಗತ್ಯ ಎಂದು ಹೇಳಿದರು.
ಮಂಗಳೂರು ಇಂದು ಪೆಟ್ರೋ ಕೆಮಿ ಕಲ್ ಝೋನ್ ಹಾಗೂ ಪ್ರಮುಖ ವಾಣಿಜ್ಯ ನಗರಿ ಯಾಗಿ ರುವು ದರಿಂದ ವಿಕೋಪ ನಿರ್ವ ಹಣೆ ಸವಾ ಲಾಗಿ ಪರಿಣ ಮಿಸಿದೆ ಎಂದ ಅವರು, ಪ್ರಾ ಕೃತಿಕ ಅಥವಾ ಮಾನವ ನಿರ್ಮಿತ ವಿಕೋ ಪಗ ಳಲ್ಲಿ ಎಲ್ಲರೂ ಹೊಣೆ ಯರಿತು ವರ್ತಿ ಸುವು ದರಿಂದ ಎಲ್ಲ ರಿಗೂ ಅನು ಕೂಲ ವಾಗ ಲಿದೆ ಎಂದರು.
ವಿಕೋಪ ನಿರ್ವಹಣೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಇಂತಹ ಕಾರ್ಯಾಗಾರಗಳು ಮತ್ತು ಅಣಕು ಪ್ರಯೋಗಗಳು ಅಗತ್ಯ. ಇಂತಹ ಪ್ರಯೋಗಗಳು ನಮ್ಮ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವುದಲ್ಲದೆ ಉತ್ತಮ ಪಡಿಸುವ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ಮೇಯರ್ ಗುಲ್ಜಾರ್ ಭಾನು ಅಧ್ಯಕ್ಷೀಯ ಸ್ಥಾನದಿಂದ ಶುಭ ಹಾರೈಸಿದರು. ಯುನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಸೇವೆಯ ಜೇಮ್ಸ್ ವಾರ್ನ್  ಪೆನೆ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು. ಮಹಾನಗರಪಾಲಿಕೆ ಆಯುಕ್ತರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತರಾದ ಡಾ ವೆಂಕಟೇಶ್ ಸ್ವಾಗತಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಭಾಟಿಯಾ ಮತ್ತು ಸುಧೀರ್ ರಾಥೋಡ್ ಪಾಲ್ಗೊಂಡರು.