Wednesday, November 14, 2012

ಮಕ್ಕಳನ್ನು ಸಮಾಜಮುಖಿಗಳಾಗಿಸುವ ಹೊಣೆ ಸಮಾಜದ್ದು: ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್ 14: ನಮ್ಮ ಮಕ್ಕಳನ್ನು ಪ್ರಜ್ಞಾವಂತ ಹಾಗೂ ವಿದ್ಯಾವಂತರನ್ನಾಗಿ ಬೆಳೆಸುವ ಸಾಮಾಜಿಕ ಹೊಣೆ ದೇಶದ ಪ್ರತಿಯೊಬ್ಬ ನಾಗರೀಕನದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
    ಅವರಿಂದು ನಗರದ ಬಿಜೈ ಕಾಪಿ ಕ್ಕಾಡಿ ನಲ್ಲಿ ರುವ ಚಿಣ್ಣರ ತಂಗು ಧಾಮದಲ್ಲಿ ಮಕ್ಕಳ ದಿನಾ ಚರಣೆ ಯಲ್ಲಿ ಪಾಲ್ಗೊಂಡು ಮಾತ ನಾಡು ತ್ತಿದ್ದರು. ನಗ ರೀಕ ರಣದ ಇನ್ನೊಂದು ಮುಖ ಕೊಳಚೆ ಪ್ರದೇಶ ಗಳು. ಇಲ್ಲಿ ಬೆಳೆ ಯುವ ಮಕ್ಕಳಿಗೆ ಉತ್ತಮ ವಿದ್ಯಾ ಭ್ಯಾಸ ಹಾಗೂ ಸರ್ಕಾ ರದ ಸವ ಲತ್ತು ಗಳನ್ನು ನೀಡುವ ಹೊಣೆ ಯನ್ನು ಇಂತಹ ತಂಗು ಧಾಮಗಳ ಮೂಲಕ ಹಲವರ ಸಹ ಕಾರ ದೊಂದಿಗೆ ಇಂದು ಜಿಲ್ಲಾಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಒಟ್ಟು ಮಹಾನಗರಪಾಲಿಕೆಗೆ ಒಂದರಂತೆ 9 ತಂಗುಧಾಮಗಳನ್ನು ಪ್ರಥಮ ಹಂತದಲ್ಲಿ ನೀಡಿದ್ದು, ಜಿಲ್ಲೆಗೆ ಎರಡು ತಂಗುದಾಮಗಳನ್ನು ನೀಡಿದೆ. ಇಲ್ಲಿ ಮಕ್ಕಳಿಗೆ ಬೆಳೆಯಲು ಪೂರಕ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯು ಉತ್ತಮ ಮಾದರಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ನೀಡಿದ್ದು, ಇದೂ ಉತ್ತಮ ತಂಗುದಾಮವಾಗಲಿ ಎಂದು ಹಾರೈಸಿದರು. ಮಕ್ಕಳಿಗೆ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಗ್ರಾಮಸಭೆಗಳಿಂದ ಆರಂಭವಾಗಬೇಕು ಎಂದರು. ಮಕ್ಕಳ ಹಕ್ಕುಗಳ ಜಾರಿಗಾಗಿ ಮಕ್ಕಳ ಗ್ರಾಮಸಭೆ ಚಾರ್ಟ್ ಬಿಡುಗಡೆ ಮಾಡಿದರು.
ಕಾರ್ಯ ಕ್ರಮ ವನ್ನು ಜಿಲ್ಲಾ ಪಂಚಾ ಯತ್ ಉಪಾ ಧ್ಯಕ್ಷ ರಾದ ರಿತೇಶ್ ಶೆಟ್ಟಿ ಅವರು ಮಕ್ಕಳ ಹಕ್ಕು ಗಳ ಕುರಿತ ಜಾಗೃತಿ ಮೂಡಿ ಸುವ ಚಾರ್ಟ್  ಬಿಡಿ ಸುವ ಮೂಲಕ ಉದ್ಘಾ ಟಿಸಿ, ಉದ್ಘಾ ಟನಾ ಭಾಷಣ ಮಾಡಿದರು. ಮಕ್ಕಳ ರಕ್ಷಣಾ ಹಕ್ಕು ಘಟಕದ ಅಧ್ಯಕ್ಷ ರಾದ ಗ್ರೇಸಿ ಗೊನ್ಸಾ ಲಿಸ್, ತಂಗು ದಾಮ ವನ್ನು ನಿರ್ವ ಹಿಸು ತ್ತಿರುವ ಪ್ರಜ್ಞಾ ಸಂಸ್ಥೆಯ ಪ್ರೊ. ಹೀಲ್ಡಾ ರಾಯ ಪ್ಪನ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾದ ಆಶಾ ನಾಯಕ್, ವಿದ್ಯಾಂಗ ಉಪ ನಿರ್ದೇ ಶಕರಾದ ಮೋಸೆಸ್ ಜಯಶೇಖರ್, ಸರ್ವಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಶಿವಪ್ರಕಾಶ್,  ಪಡಿ ಸಂಸ್ಥೆಯ ರೆನ್ನಿ ಡಿ ಸೋಜ, ಬಾಳ್ತಿಲ ಕೃಷ್ಣ ಮೂರ್ತಿ, ಸುರೇಶ್ ಶೆಟ್ಟಿ ಮುಂತಾದವರು ಪಾಲ್ಗೊಂಡರು.
ಬಳಿಕ ಮಕ್ಕಳು ತಿಂಕ್ ಹೆಲ್ತ್ ನಾಟ್ ಡ್ರಗ್ ಚಿತ್ರ ಕಲೆ ರಚಿಸು ವಲ್ಲಿ ನಿರತ ರಾದರು. ತಂಗು ಧಾಮ ದಲ್ಲಿ ಪ್ರಸಕ್ತ 50 ಮಕ್ಕ ಳಿದ್ದಾರೆ.