Saturday, November 10, 2012

ಸಮಾನ ಸಮಾಜ ಸೃಷ್ಟಿ ಎಲ್ಲರ ಕೊಡುಗೆ ಅಗತ್ಯ: ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್.10: ಜಿಲ್ಲೆಯ ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಗೋಕುಲ್ ದಾಸ್ ಅವರನ್ನು ಸನ್ಮಾನಿಸುವುದು ಹೆಮ್ಮೆ ಹಾಗೂ ಕರ್ತವ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಎನ್. ಎಸ್ ಚನ್ನಪ್ಪಗೌಡ ಹೇಳಿದರು.
ಇಂದು ನಗ ರದ ಚಿಲಿಂ ಬಿಯ ಕುದ್ಮುಲ್ ಗಾರ್ಡನ್ ನಲ್ಲಿ ರುವ  ಗೋಕುಲ್ ದಾಸ್ ಅವರ ಮನೆ ಯಂಗಳ 'ಶ್ರೀ ರಂಗ ಪ್ರಸಾದ್  ದಲ್ಲಿ ಕುಂದಾ ಪುರ, ಉಡುಪಿ ಮತ್ತು ಮಂಗ ಳೂರಿನ ಕೊರಗ ಸಮುದಾ ಯದ ವರು ಹಮ್ಮಿ ಕೊಂಡಿದ್ದ ಸನ್ಮಾನ ಸಮಾ ರಂಭ ದಲ್ಲಿ ಮಾತ ನಾಡು ತ್ತಿದ್ದರು. ಈ ಬಾರಿಯ ರಾಜ್ಯ ವಾಲ್ಮೀಕಿ ಪ್ರಶಸ್ತಿ ಪಡೆದ ಹಿರಿಯ ಮುಖಂಡ ಗೋಕುಲ್ ದಾಸ್ ಅವರನ್ನು ಸನ್ಮಾನಿ ಸುವುದು ತಳ ಮಟ್ಟದವರ ಏಳಿಗೆಗಾಗಿ ದುಡಿಯುತ್ತಿರುವ ಒಳ್ಳೆಯ ಮನಸ್ಸುಗಳಿಗೆ ಸ್ಫೂರ್ತಿಯನ್ನು ನೀಡಲಿದೆ ಎಂದರು.
ಜಿಲ್ಲಾಡಳಿತ ಸಮುದಾಯದ ಸಹಕಾರದಿಂದ ದಕ್ಷಿಣ ಕನ್ನಡದಲ್ಲಿ ನಿವೇಶನ ಹೊಂದಿರುವವರಿಗೆ 750 ಮನೆ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಲು ಸೂಕ್ತ ಕ್ರಮಕೈಗೊಂಡಿದೆ.
ಮಂಗಳೂರು, ಬಂಟ್ವಾಳ ಗಳಲ್ಲಿ ಸಮು ದಾಯದ ಹೆಚ್ಚಿನ ಸಂಖ್ಯೆ ಜನ ರಿದ್ದು,ಸೌಲಭ್ಯ ಗಳನ್ನು ಸದು ಪಯೋಗ ಪಡಿಸಿ ಕೊಳ್ಳಬೇಕು. ಸರ್ಕಾರ ನೀಡಿದ ಭೂಮಿ ಯನ್ನು ಇತ ರರಿಗೆ ಮಾರಾಟ ಮಾಡದೆ ಸದುಪ ಯೋಗ ಪಡಿಸಿ ಅಭಿ ವೃದ್ಧಿ ಹೊಂದಿ. ಜಮೀನಿಗೆ ಬೆಲೆ ಬಂದ ಮೇಲೆ ಅದನ್ನು  ಮಾರಾಟ ಮಾಡುವ ದುರುಪಯೋಗದ ವರದಿಗಳು ಹೆಚ್ಚಾಗಿದ್ದು, ಇಂತಹದುಕ್ಕೆ ಕಡಿವಾಣ ಹಾಕಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಕುಲ್ ದಾಸ್ ಅವರು ಹರ್ಷ ವ್ಯಕ್ತಪಡಿಸಿ, ಶಿಕ್ಷಣ ಮತ್ತು ಅರಿವಿನಿಂದ ಸಮುದಾಯ ಅಭಿವೃದ್ಧಿ ಸಾಧ್ಯ ಎಂದರು. ಸಮುದಾಯ ಅಭಿವೃದ್ಧಿ ಹೋರಾಟಕ್ಕೆ ಜಿಲ್ಲಾಡಳಿತ, ಸರ್ಕಾರ ತಮಗೆ ಬೆಂಬಲ ನೀಡಿದೆ ಎಂದರು.
ಐಟಿಡಿಪಿ ಅಧಿಕಾರಿ ಸಬೀರ್ ಅಹಮ್ಮದ್ ಮುಲ್ಲಾ ಶುಭ ಹಾರೈಸಿದರು. ಮತ್ತೋಡಿ ಸ್ವಾಗತ, ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಅಧ್ಯಕ್ಷತೆಯನ್ನು ಸಮುದಾಯದ ಮುಖಂಡ ಗಣೇಶ್ ವಹಿಸಿದ್ದರು.