Friday, November 16, 2012

ಹೈನುಗಾರಿಕೆ ಲಾಭದಾಯಕವಾಗಿಸಲು ಹಸಿರು ಮೇವು ಉತ್ಪಾದನೆಗೆ ಆದ್ಯತೆ ನೀಡಿ

ಮಂಗಳೂರು,ನವೆಂಬರ್.16: ರಾಜ್ಯದ 13 ಒಕ್ಕೂಟಗಳಲ್ಲಿ ಒಂದಾಗಿರುವ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ ದಿನಕ್ಕೆ 2.35 ಸಾವಿರ ಲೀಟರ್ .ಹಾಲು ಉತ್ಪಾದನೆಯಾಗುತ್ತಿದ್ದು,ಕಳೆದ ವರ್ಷಕ್ಕಿಂತ ಶೇ.15ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರತಿನಿತ್ಯ 3 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು ಶೇ.4ರಷ್ಟು ಪ್ರಗತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
  ಕರ್ನಾ ಟಕ ರಾಜ್ಯ ಸಹ ಕಾರ ಮಹಾ ಮಂಡಳಿ, ದ.ಕ.ಜಿಲ್ಲಾ ಸಹ ಕಾರಿ ಯೂನಿ ಯನ್, ದ.ಕ.ಸಹ ಕಾರಿ ಹಾಲು ಉತ್ಪಾ ದಕರ ಒಕ್ಕೂ ಟದ ವತಿ ಯಿಂದ  ಅಖಿಲ ಭಾರತ 59ನೇ ಸಹ ಕಾರಿ ಸಪ್ತಾ ಹದ ಅಂಗ ವಾಗಿ ನಗರದ ಕುಲ ಶೇಕ ರದ ಲ್ಲಿನ  ಕೆಎಂಎಫ್ ಡೇರಿ ಸಭಾಂ ಗಣದಲ್ಲಿ ಇಂದು ನಡೆದ `ಸಹಕಾರ ಸಂಸ್ಥೆಗಳಲ್ಲಿ ಮೌಲ್ಯವರ್ಧನೆಯನ್ನು ಬಲಪಡಿಸುವ ಮತ್ತು ಪ್ರೋತ್ಸಾಹಿಸುವ' ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.  
ದಕ್ಷಿಣ ಕನ್ನಡ ಹಾಲು ಉತ್ಪಾದಿಸುವ ರೈತರಿಗೆ ಹೆಚ್ಚಿನ ಲಾಭ ಸಿಗುತ್ತಿಲ್ಲ. ಹಾಲಿನ ದರಕ್ಕಿಂತ ಪಶು ಆಹಾರದ ದರವೇ ಹೆಚ್ಚಾಗುತ್ತಿರುವುದು ರೈತರಿಗೆ ಸಮಸ್ಯೆಯಾಗಿದೆ. ಆದ್ದರಿಂದ  ರೈತರು ಹಸಿರು ಮೇವು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ಸಮಾ ರಂಭ ವನ್ನು ಉದ್ಘಾಟಿಸಿ ಮಾತ ನಾಡಿದ ಎಂದು ನಿಟ್ಟೆ ವಿಶ್ವ ವಿದ್ಯಾ ನಿಲ ಯದ ಪ್ರೋ ಚಾನ್ಸೆ ಲರ್ ಡಾ.ಎಂ.ಶಾಂತ ರಾಮ ಶೆಟ್ಟಿ ಅವರು, ಯಾವುದೇ ಕ್ಷೇತ್ರ ಹೊಸತನಕ್ಕೆ ತೆರೆದುಕೊಂಡಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಬದಲಾವಣೆಯೊಂದಿಗೆ ಸಾಕಷ್ಟು ಬೆಳವಣಿಗೆಯನ್ನು ಕಂಡಿದ್ದು, ವಿವಿಧ ಸಹಕಾರ ರಂಗಗಳಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
       ಮೇಯರ್ ಗುಲ್ಜಾರ್ ಭಾನು ಪ್ಯಾಶ್ಚರೀಕರಣ ಯಂತ್ರ ವನ್ನು ಉದ್ಘಾ ಟಿಸಿ ದರು. ತುಳು ರಂಗ ಭೂಮಿ ಕಲಾ ವಿದ ದೇವ ದಾಸ್ ಕಾಪಿ ಕಾಡ್ `ಕ್ಷೀರಾಂಜಲಿ' ಎಂಬ ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸಿದರು.  ಬೆಣ್ಣೆ ಐಸ್ಕ್ರೀಂ ಇತ್ಯಾದಿಗಳನ್ನು ಶೈತೀಕರಿಸಿಡುವ 10000 ಲೀ.ಸಾಮಥ್ರ್ಯದ `ವಾಕ್ ಇನ್-ಡಿಫ್ರೀಸರ್ ಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭಅತಿಥಿಗಳು ಮ್ಯಾಂಗೋ ಲಸ್ಸಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಹಾಲು ಶೇಖರಣಾ ಸೈಲೋವನ್ನು ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿದರು.
ಆಹಾರ ಸುರಕ್ಷತೆಗೆ ಸಂಬಂಧಿಸಿ ಕೆಎಂಎಫ್ಗೆ ದೊರೆತ ಐಎಸ್ಒ ಪ್ರಮಾಣಪತ್ರವನ್ನು ಡಿಎನ್ವಿ ಸಂಸ್ಥೆಯ ವಲಯ ಮುಖ್ಯಸ್ಥ ಪುರುಷೋತ್ತಮ ಭಟ್ ಹಾಗೂ ಚಿತ್ರಾ ಕೆಎಂಎಫ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಜಿಲ್ಲಾ ಸಹ ಕಾರಿ ಯೂನಿ ಯನ್ನ ಅಧ್ಯಕ್ಷ ಪಿ.ಬಿ.ದಿವಾ ಕರ ರೈ, ಪಾಲಿಕೆ ಸದಸ್ಯ ಭಾಸ್ಕರ್ ಕೆ., ಸಹ ಕಾರಿ ಸಂಘ ಗಳ ಉಪ ನಿಬಂ ಧಕ ಬಿ.ಕೆ.ಸಲೀಂ, ಕೆಎಂಎಫ್ ನಿರ್ದೇಶ ಕರಾದ ಡಾ.ಕೆ.ಎಂ.ಕೃಷ್ಣ ಭಟ್, ಕೆ.ಪಿ.ಸುಚ ರಿತ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ವೀಣಾ ಆರ್.ರೈ, ಎಂ.ರಾಮ ಭಟ್, ನಾಮ ನಿರ್ದೇಶಿತ ನಿರ್ದೇಶಕ ಎಚ್.ಮುಕುಂದ ನಾಯಕ್, ಪದನಿಮಿತ್ತ ಕಾರ್ಯದರ್ಶಿ ಡಾ.ಬಿ.ವಿ.ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಕೆಎಂಎಫ್ ಮಾಜಿ ಅಧ್ಯಕ್ಷ ಕೆ.ಸೀತಾರಾಮ ರೈ ಸ್ವಾಗತಿಸಿದರು. ನಿರ್ದೇಶಕ ಕಾಪು ದಿವಾಕರ ಶೆಟ್ಟಿ ವಂದಿಸಿದರು. ಡಿ.ಎಸ್.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.