Thursday, April 1, 2010

ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಥಮ ದಿನ: ಯಾವುದೇ ಅವ್ಯವಹಾರವಿಲ್ಲ

ಮಂಗಳೂರು,ಏ.1:ಜಿಲ್ಲೆಯಲ್ಲಿ ಇಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಸುಗಮವಾಗಿ,ಸುಲಲಿತವಾಗಿ ನಡೆದಿದ್ದು, ಯಾವುದೇ ಅವ್ಯವಹಾರ ವರದಿಯಾಗಿಲ್ಲ. ಇಂದು ನಡೆದ ದ್ಚಿತೀಯ ಭಾಷಾ ಪತ್ರಿಕೆ ಪರೀಕ್ಷೆಗೆ ಒಟ್ಟು 31,522 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪರೀಕ್ಷೆಗೆ ಒಟ್ಟು 32,186 ವಿದ್ಯಾರ್ಥಿಗಳು ನೋಂದಾಯಿಸಿದ್ದು, 664 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ.