Friday, April 30, 2010

ಸಾಹಿತ್ಯದಿಂದ ಉತ್ತಮ ಬದುಕು: ಪ್ರೊ. ಸಾ.ಶಿ. ಮರುಳಯ್ಯ

ಮಂಗಳೂರು, ಏ.30: ಸಾಹಿತ್ಯ ನಮ್ಮ ಬದುಕು,ಸಂಸ್ಕೃತಿಯ ಪ್ರತಿಬಿಂಬ;ಪಂಚಲಲಿತಕಲೆಗಳಲ್ಲಿ ಸಾಹಿತ್ಯಕ್ಕೆ ಉನ್ನತ ಸ್ಥಾನವಿದೆ.ನಮ್ಮ ನಾಗರೀಕತೆಗೆ ಹೊಸ ಆಯಾಮ ನೀಡುವುದು ಸಾಹಿತ್ಯ ಎಂದು ಹಿರಿಯ ಸಾಹಿತಿ ಪ್ರೊ.ಸಾ.ಶಿ.ಮರುಳಯ್ಯ ಅವರು ಹೇಳಿದರು. ಅವರಿಂದು ಪುರಭವನದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಮ್ಮ ಮುಂದಿನ ಜನಾಂಗ ವಾದ ಮಕ್ಕಳಲ್ಲಿ ಸಾಹಿತ್ಯ ಪ್ರೀತಿಯನ್ನು ಬೆಳೆಸುವ ಅಗತ್ಯವನ್ನು ಪ್ರತಿ ಪಾದಿಸಿದ ಅವರು, ಮಕ್ಕಳ ಚೈತನ್ಯ ಬೆಳಗಲು ಅವರಲ್ಲಿ ಸೃಜನ ಶೀಲನತೆ ಹೊಮ್ಮಲು ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಬೇಕೆಂದರು.ಮಕ್ಕಳ ಪ್ರತಿಭೆ ಪಚ್ಚೆಯಾಗದೆ ಜ್ಯೋತಿಯಾಗಲು ಹಿರಿಯರು ಮಾರ್ಗ ದರ್ಶಕರಾಗ ಬೇಕೆಂದರು. ನಮ್ಮ ಜನಪದಕ್ಕೆ ಅಪಾರ ಶಕ್ತಿಯಿದ್ದು, ಬದುಕಿಗೆ ನಿರಂತರ ದಾರಿ ದೀಪವಾಗಿದೆ ಎಂದ ಅವರು ತುಳು ಸಂಸ್ಕೃತಿಯ ವೈಭವವನ್ನು ವರ್ಣಿಸಿದರು.ಸಮ್ಮೇಳ ನಾಧ್ಯಕ್ಷರಾಗಿದ್ದ ಬೋಳ ಚಿತ್ತರಂಜನ್ ದಾಸ ಶೆಟ್ಟಿ ಅವರು, ಸಾಹಿತ್ಯವಿರುವುದು ಕೀರ್ತಿ ಪ್ರತಿಷ್ಠೆಗಲ್ಲ. ಅದಿರುವುದು ಸಮಾಜದ ಋಣ ತೀರಿಸಲು. ನಿರ್ಮಲ ಬದುಕನ್ನು ಬದುಕಲು ಕಲಿಸುವುದು ಸಾಹಿತ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸ್ವತಂತ್ರ ಮತ್ತು ಕೃತಿಕಾರ ನಿಂದಲೇ ಹುಟ್ಟು ಪಡೆದ ಪಾತ್ರಗಳು ಕಥೆ,ಕಾದಂಬರಿ ರೂಪದಲ್ಲಿ ಓದುಗನನ್ನು ಮಾತಾಡಿಸಿದರೆ ಅವರಿಗೆ ಕೃತಿಕಾರರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.ಬರಹಗಾರರಲ್ಲಿ ಓದುಗರ ಅನುಭವ ನಮಗಿಂತ ಹಿರಿದು ಎಂಬ ಕಲ್ಪನೆ ಇರಬೇಕು ಎಂದರು. ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈಸ್ ಆಡ್ಮಿರಲ್ ಬೋಳ ರಾಧಾಕೃಷ್ಣ ರಾವ್, ನಿಟ್ಟೆ ವಿವಿ ಕುಲಪತಿ ಡಾ.ಎಂ. ಶಾಂತರಾಮ ಶೆಟ್ಟಿ, ಪ್ರಭಾಕರ ನೀರಮಾರ್ಗ ಸೇರಿದಂತೆ, ಮೇಯರ್ ರಜನಿ ದುಗ್ಗಣ್ಣ ನೇತೃತ್ವದಲ್ಲಿ ಪಾಲಿಕೆಯ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದರು. ವಾದ್ಯ ಪರಿಕರಗಳ ಪ್ರದರ್ಶನ ಉದ್ಘಾಟನೆಯನ್ನು ವಿಪಕ್ಷ ಸಚೇತಕ ಅಭಯಚಂದ್ರ ಜೈನ್ ನೆರವೇರಿಸಿದರು. ಎಂ. ಶೇಖರ ಪೂಜಾರಿ, ಶಾಸಕರಾದ ಎನ್. ಯೋಗೀಶ್ ಭಟ್, ಯು ಟಿ ಖಾದರ್ ಉಪಸ್ಥಿತರಿದ್ದರು.