Friday, April 23, 2010

ಅಹವಾಲು ಸಲ್ಲಿಕೆಗೆ ಪ್ರತ್ಯೇಕ ಸಹಾಯವಾಣಿ

ಮಂಗಳೂರು ಏಪ್ರಿಲ್ 23:ಭಾರತ ಜನಗಣತಿ 2011ರನ್ವಯ ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿಯೊಂದು ಗಣತಿ ಬ್ಲಾಕಿನಲ್ಲಿ ಮನೆಪಟ್ಟಿ ತಯಾರಿ ಹಾಗೂ ಮನೆಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ ಕಾರ್ಯವು ನಿಗದಿತ ಕಾರ್ಯಕ್ರಮ ವೇಳಾಪಟ್ಟಿಯಂತೆ 15.04.2010ರಿಂದ ಪ್ರಾರಂಭಗೊಂಡಿದ್ದು ಗಣತಿದಾರರು ತಮ್ಮ ಕರ್ತವ್ಯ ನಿರ್ವಹಿಸು ತ್ತಿರುವ ಸಂದರ್ಭದಲ್ಲಿ ಯಾವುದೇ ನ್ಯೂನತೆ ಯಾ ಅಸಮರ್ಪಕ ಕಾರ್ಯ ನಿರ್ವಹಣೆ ಕಂಡು ಬಂದಲ್ಲಿ ಸಾರ್ವಜನಿಕರು ಈ ಬಗ್ಗೆ ತಮ್ಮ ಅಹವಾಲನ್ನು ದೂರವಾಣಿ ಮೂಲಕ ಯಾ ಲಿಖಿತ ದೂರು ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಮಂಗಳೂರು ಮಹಾನಗರಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಸಹಾಯವಾಣಿ ಕೇಂದ್ರ ರಚಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಮಹಾನಗರಪಾಲಿಕೆ ಆಯುಕ್ತ ಕೆ. ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ. ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 0824- 2220306, 155313 (ಶುಲ್ಕರಹಿತ).