Friday, April 23, 2010

ಮಂಗಳೂರು ಆರ್ ಟಿ ಒ: 74.41ಕೋಟಿ ರೂ. ರಾಜಸ್ವ ಸಂಗ್ರಹ

ಮಂಗಳೂರು ಏಪ್ರಿಲ್ 23: ಪ್ರಾದೇಶಿಕ ಸಾರಿಗೆ ಕಚೇರಿ ಮಂಗಳೂರು 2009-10ನೇ ಸಾಲಿನಲ್ಲಿ 74,40,95,359 ರೂ. ರಾಜಸ್ವ ಸಂಗ್ರಹಿಸಿದ್ದು, ಗುರಿ ಮೀರಿದ ಸಾಧನೆಯಾಗಿದೆ ಎಂದು ಆರ್ ಟಿ ಒ ಪುರುಷೋತ್ತಮ ಅವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 68.10 ಕೋಟಿ ರೂ.ಗಳ ರಾಜಸ್ವ ವಸೂಲಾತಿಗೆ ಗುರಿ ನಿಗದಿ ಪಡಿಸಲಾಗಿದ್ದು, ಒಟ್ಟು 74,40,95,359 ಕೋಟಿ ರೂ.ಗಳ ದಾಖಲೆ ಪ್ರಮಾಣದ ರಾಜಸ್ವ ಸಂಗ್ರಹ ಮಾಡಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 30,296 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, 2,265 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 215 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 37,51,177 ರೂ.ಗಳ ತೆರಿಗೆ ಮತ್ತು 67,80,810 ರೂ.ಗಳ ದಂಡ ಹೀಗೆ ಒಟ್ಟು 1,05,31,987 ರೂ.ಗಳನ್ನು ವಸೂಲು ಮಾಡಲಾಗಿದೆ. ನಿಗದಿತ ಮಿತಿಗಿಂತ ಅಧಿಕ ಭಾರದ ಕಬ್ಬಿಣದ ಅದಿರು ಮತ್ತಿತರ ಸರಕುಗಳನ್ನು ಹೇರಿದ 15,159 ಸರಕು ಸಾಗಾಣಿಕೆ ವಾಹನ ತಪಾಸಣೆ ಮಾಡಿ 343 ವಾಹನಗಳ ಮೇಲೆ ಪ್ರಕರಣ ದಾಖಲಿಸಿ 49,13,040 ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಈ ಅವಧಿಯಲ್ಲಿ 3,346 ಬಸ್ಸುಗಳ ತಪಾಸಣೆ ಮಾಡಿ 415 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ 9 ಬಸ್ಸುಗಳನ್ನು ವಿವಿಧ ಅಪರಾಧಗಳಿಗೆ ಜಪ್ತಿ ಮಾಡಲಾಗಿದೆ. 338 ಎಐಟಿಒಬಿ ಗಳನ್ನು ತಪಾಸಣೆ ಮಾಡಿ 39 ಎಐಟಿಒಬಿ ಗಳ ವಿರುದ್ಧ ಪ್ರಕರಣ ದಾಖಲಿಸಿ 1 ವಾಹನ ವಶಪಡಿಸಿಕೊಳ್ಳಲಾಗಿದೆ. 397 ಒಪ್ಪಂದ ವಾಹನಗಳನ್ನು ತಪಾಸಣೆ ಮಾಡಿ 48 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ 8 ವಾಹನಗಳ ಜಪ್ತಿ ಮಾಡಲಾಗಿದೆ. 1737 ಆಟೋರಿಕ್ಷಾಗಳನ್ನು ತಪಾಸಣೆ ಮಾಡಿ 163 ಆಟೋರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸಿ 5 ಆಟೋರಿಕ್ಷಾಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಹೆಚ್ಚುವರಿ ಬಾಡಿಗೆ ವಸೂಲಿ ಮತ್ತು ಪ್ರಯಾಣಿಕರೊಂದಿಗೆ ಅನುಚಿತ ವರ್ತಿಸಿರುವುದಾಗಿ ಸಾರ್ವಜನಿಕರಿಂದ ದೂರು ಬಂದ 27 ಪ್ರಕರಣಗಳಲ್ಲಿ ಆಟೋರಿಕ್ಷಾ ಚಾಲಕ/ಮಾಲಿಕರನ್ನು ವಿಚಾರಣೆ ನಡೆಸಿ 14,200 ದಂಡ ವಸೂಲಾಗಿದೆ. 24 ಪ್ರಕರಣಗಳಲ್ಲಿ ಬಸ್ಸುಗಳ ಚಾಲಕ/ನಿರ್ವಾಹಕರು ಮತ್ತು ಬಸ್ಸು ಮಾಲೀಕರನ್ನು ವಿಚಾರಣೆ ನಡೆಸಿ ದಂಡ ವಿಧಿಸಲಾಗಿದೆ.
ನಿಗದಿತ ಮಿತಿಗಿಂತ ಅಧಿಕ ಭಾರ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 114 ಸರಕು ಸಾಗಾಣಿಕ ವಾಹನಗಳ ಪರವಾನಿಗೆಗಳನ್ನು ಅಮಾನತು ಮಾಡಲಾಗಿದೆ. 127 ಪ್ರಕರಣಗಳಲ್ಲಿ ಪರವಾನಿಗೆ ಅಮಾನತು ಮಾಡುವಂತೆ ಇತರ ಜಿಲ್ಲೆಗಳ ಪ್ರಾಧಿಕಾರಿಗಳಿಗೆ ಕಳುಹಿಸಲಾಗಿದೆ. 42 ಪ್ರಕರಣಗಳಲ್ಲಿ ಚಾಲಕರ ಅನುಜ್ಞಾ ಪತ್ರ ಅಮಾನತು ಮಾಡುವಂತೆ ಸಂಬಂಧಿಸಿದ ಚಾಲನ ಆ ಪ್ರಾಧಿಕಾರಗಳಿಗೆ ಕಳುಹಿಸಲಾಗಿದೆ. 2 ಪ್ರಕರಣಗಳಲ್ಲಿ ಮಂಗಳೂರು ಕಚೇರಿಯಲ್ಲಿ ಅನುಜ್ಞಾ ಪತ್ರವನ್ನು ಅಮಾನತು ಪಡಿಸಲಾಗಿದೆ.