Monday, April 26, 2010

ವಿಶ್ವವಿದ್ಯಾನಿಲಯ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ

ಮಂಗಳೂರು ಏಪ್ರಿಲ್ 26:ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹೆಚ್ಚಿನ ಸ್ನಾತಕೋತ್ತರ ಮತ್ತು ವೃತ್ತಿಪೂರಕ ಕೋರ್ಸುಗಳನ್ನು ಪ್ರಾರಂಭಿಸಬೇಕೆಂದು ಯುಜಿಸಿ ಯ ಅಂಗಸಂಸ್ಥೆಯಾದ ನ್ಯಾಕ್ ಸಲಹೆ ಮಾಡಿದೆ.
ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ಪರಿಶೀಲನಾ ಸಮಿತಿ ಕಾಲೇಜಿನ ಎಲ್ಲ ವಿಭಾಗಗಳನ್ನು ಹಾಗೂ ಚಟುವಟಿಕೆಗಳನ್ನು ಪರಿಶೀಲಿಸಿತಲ್ಲದೆ, ವಿಶ್ವವಿದ್ಯಾನಿಲಯದ ಕುಲಪತಿಗಳು, ಕುಲಸಚಿವರು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಕಾಲೇಜಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿತು. ವಿದ್ಯಾರ್ಥಿಗಳ ಶಿಸ್ತುಬದ್ಧ ನಡವಳಿಕೆ ಹೆತ್ತವರ ಮತ್ತು ಹಳೆ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಪ್ರಶಂಸಿಸಿತು. ಸಮಿತಿಯಲ್ಲಿ ಜೈಪುರ ವಿವಿಯ ಪ್ರಾಧ್ಯಾಪಕ ಡಾ ಸುಧೀರ್ ಮತ್ತು ಸದಸ್ಯರಾದ ಮಧುರೈ ಕಾಮರಾಜ ವಿವಿಯ ಪ್ರಾಧ್ಯಾಪಕ ಡಾ.ಮಾರಿ ಮುತ್ತು ಅವರು ಕಾಲೇಜಿನ ಕಾರ್ಯವೈಖರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.