Thursday, April 29, 2010

ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಮಂಗಳೂರು, ಏ.29: ನಗರದ ಪುರಭವನದಲ್ಲಿ ಏ.30 ರಂದು ನಡೆಯಲಿರುವ ಒಂದು ದಿನದ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ತಾಲೂಕು ಅಧ್ಯಕ್ಷ ಸರ್ವೋತ್ತಮ ಅಂಚನ್ ಅವರ ನೇತೃತ್ವದಲ್ಲಿ ನಡೆಯುತ್ತಿವೆ. ಪುರಭವನದ ಪರಿಸರಕ್ಕೆ ಗ್ರಾಮೀಣ ಕಳೆ ಬರುತ್ತಿದೆ. ವೇದಿಕೆಯಲ್ಲಿ ಮಾವಿನ ಕಾಯಿಯಿಂದ ತುಂಬಿದ ಮಾವು, ಬೈಹುಲ್ಲಿನ ವೇದಿಕೆ, ಪುರಭವನದ ಹೊರಗಡೆ ಎತ್ತಿನಗಾಡಿ, ಬೈಹುಲ್ಲಿನ ಮನೆ ಸೇರಿದಂತೆ ಸಂಪೂರ್ಣ ಗ್ರಾಮದ ಸೌಂದರ್ಯವನ್ನು ಮುಲ್ಕಿಯ ಸುವರ್ಣ ಆರ್ಟ್ಸ್ ನವರು ಪುರಭವನದಲ್ಲಿ ನಿರ್ಮಾಣ ಮಾಡಿದ್ದಾರೆ.
ಹಿರಿಯ ಸಾಹಿತಿ ಬೋಳ ಚಿತ್ತರಂಜನ್ ದಾಸ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಪ್ರೊ. ಸಾ.ಶಿ. ಮರುಳಯ್ಯ ಅವರು ಸಮ್ಮೇಳನ ಉದ್ಘಾಟಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್, ಶಾಸಕ ಯೋಗಿಶ್ ಭಟ್,ಅಭಯಚಂದ್ರ ಜೈನ್,ಯು.ಟಿ.ಖಾದರ್ ,ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾಧಿಕಾರಿ ಪೊನ್ನುರಾಜ್ ಸೇರಿದಂತೆ ಅನೇಕ ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.ಇದೇ ಸಂದರ್ಭದಲ್ಲಿ ವಿವಿಧ ಗೋಷ್ಟಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 14 ಮಂದಿ ಸಾಧಕರ ಸನ್ಮಾನ ಮತ್ತು ಗೌರವ ಅರ್ಪಣೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ ಬೆ.8.30ಕ್ಕೆ ಸಾಹಿತ್ಯ ಮೆರವಣಿಗೆಯನ್ನು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಉದ್ಘಾಟಿಸಲಿರುವರು.