ಈ ನಿಟ್ಟಿನಲ್ಲಿ ಅಕ್ಕಪಕ್ಕದ ಜಿಲ್ಲೆಗಳು ದಕ್ಷಿಣ ಕನ್ನಡದ ಜೊತೆ ಪ್ರವಾಸೋ ದ್ಯಮಕ್ಕೆ ಸಂಬಂಧಿಸಿದ ಪರಸ್ಪರ ಒಪ್ಪಂದಕ್ಕೆ ಮುಂದಾದರೆ ಅವರಿಗೆ ಸಾರಿಗೆ ತೆರಿಗೆ ಕಡಿತ ದಂತಹ ಸೌಲಭ್ಯಗಳನ್ನು ನೀಡುವ ಭರವಸೆಯನ್ನೂ ಅವರು ನೀಡಿದರು. ಇಂತಹ ಅತ್ಯುತ್ತಮಗಳನ್ನು ನಾವು ಹೊಂದಿದ್ದೇವೆ ಎಂಬುದನ್ನು ಇತರರಿಗೆ ತೋರಿಸುವಲ್ಲಿ ನಾವು ಯಶಸ್ವಿಯಾಗಬೇಕಿದೆ ಎಂದು ಶಂಕರ ಲಿಂಗೇಗೌಡ ಹೇಳಿದರು.ಟ್ರಾವೆಲ್ ಏಜೆಂಟ್ ಗಳು ಗ್ಲೋಬಲ್ ನೆಟ್ ವರ್ಕಿಂಗ್ ಜೊತೆ ಸಂಪರ್ಕ ಇರಿಸುವುದರಿಂದಾಗುವ ಲಾಭಗಳನ್ನು ವಿವರಿಸಿದ ಅವರು, ಹೊಸಪೇಟೆಯಲ್ಲಿರುವ ಮಲ್ಲಿಗೆ ಹೊಟೇಲ್ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು.
ದಕ್ಷಿಣ ಕನ್ನಡದಲ್ಲಿ ಶೈಕ್ಷಣಿಕ,ಆರೋಗ್ಯ ಹಾಗೂ ನಮ್ಮ ಸ್ಥಳೀಯ ಸಂಸ್ಕೃತಿ ಆಚರಣೆಗಳಿಂದ ಪ್ರವಾಸಿಗಳನ್ನು ಸೆಳೆಯುವುದರಲ್ಲಿ ನಾವು ಯಶಸ್ವಿಯಾಗಬಹುದೆಂದು ಹಿಂದೆ ಪ್ರವಾಸೋದ್ಯಮ ಇಲಾಖಾ ಕಾರ್ಯದರ್ಶಿಗಳು ಆಗಿದ್ದ ಅವರು ನುಡಿದರು. ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ ಗಳ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಡಿ.ತಿವಾರಿ ಅವರು 'ಮಾತಾ'ದ ಅಧಿಕೃತ ವೆಬ್ ಸೈಟ್ ನ್ನು ಉದ್ಘಾಟಿಸಿ ಮಾತನಾಡಿ,ವಿದೇಶಿ ಪ್ರವಾಸಿಗರಷ್ಟೇ ದೇಶೀ ಪ್ರವಾಸಿಗರಿಗೂ ಆದ್ಯತೆ ನೀಡಬೇಕು ಎಂದರು.ಸಾಹಸ ಮತ್ತು ಇಕೋ ಟೂರಿಸಂಗೆ ಆದ್ಯತೆ ನೀಡುತ್ತಿರುವ ಕುರಿತು ಮಾಹಿತಿ ನೀಡಿದರು.ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಶಿವಲಿಂಗಪ್ಪ ಮಾತನಾಡಿದರು. ಮಾತಾದ ಅಧ್ಯಕ್ಷ ರೋಷನ್ ಪಿಂಟೋ ಉಪಸ್ಥಿತರಿದ್ದರು. ಪಿ ಆರ್ ಒ ಲೂಯಿಸ್ ಪಿಂಟೊ ಸ್ವಾಗತಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಯೋಜನೆ ರೂಪಿಸುವ ಸಂಬಂಧ ವಿಸ್ತೃತ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಆರೋಗ್ಯ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಬೀಚ್ ಪ್ರವಾಸೋದ್ಯಮ, ಇಕೋ ಪ್ರವಾಸೋದ್ಯಮ, ಸೇರಿದಂತೆ ವಿವಿಧ ಸಮಿತಿಗಳನ್ನು ತಜ್ಞರ ನೇತೃತ್ವದಲ್ಲಿ ರಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.