1872 ರಿಂದ ಭಾರತದ ಜನಗಣತಿಯು ಜನಸಂಖ್ಯೆ, ಆರ್ಥಿಕ ಚಟುವಟಿಕೆ, ಸಾಕ್ಷರತೆ, ವಸತಿ, ನಾಗರೀಕ ಸೌಲಭ್ಯಗಳು, ಸ್ವತ್ತುಗಳು ಮತ್ತು ವೈವಿಧ್ಯಮಯ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಬಗ್ಗೆ ಸಮಗ್ರ ಮತ್ತು ಪೂರ್ವಗ್ರಹ ಪೀಡಿತವಲ್ಲದ ಮಾಹಿತಿ ಮೂಲವಾಗಿದೆ. ದೇಶದಲ್ಲಿ ಈಗಾಗಲೇ ಆಗಿರುವ ಅಭಿವೃದ್ಧಿಯ ಮೌಲ್ಯಮಾಪನ ಕೈಗೊಳ್ಳಲು, ಸಾಧಿಸುತ್ತಿರುವ ಪ್ರಗತಿಯನ್ನು ಅಳೆಯಲು ಭವಿಷ್ಯದಲ್ಲಿ ಯೋಜನೆ ರೂಪಿಸಲು ಅಗತ್ಯವಾಗಿದ್ದು, ಗಣತಿದಾರರು ಮನೆಗೆ ಬರುವಾಗ ಸೂಕ್ತ ಮಾಹಿತಿ ನೀಡಲು ಅವರು ಕೋರಿದ್ದಾರೆ.
ಜನಗಣತಿಯ ಜೊತೆಯಲ್ಲಿ ಮೊಟ್ಟ ಮೊದಲಬಾರಿಗೆ ಸಾಮಾನ್ಯ ನಿವಾಸಿಗಳ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ನ್ನು ತಯಾರಿಸಲಾಗುತ್ತಿದ್ದು, ರಾಷ್ಟ್ರೀಯ ಯೋಜನೆಗಳನ್ನು ಗುರಿ ತಲುಪಿಸಲು ಇದು ಸಹಾಯಕವಾಗಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಕಂದಾಯ ಅಧಿಕಾರಿ ಹಾಗೂ ನಗರ ಪಾಲಿಕೆ ವ್ಯಾಪ್ತಿಯ ನೋಡಲ್ ಅಧಿಕಾರಿ ಮೇಘನಾ,ಜನಗಣತಿ ಅಧಿಕಾರಿ ದಿವಾಕರ್,ಮತ್ತಿತರ ಆಧಿಕಾರಿಗಳು ಉಪಸ್ಥಿತರಿದ್ದರು.
ಶಿಸ್ತು ಕ್ರಮ: ಮಹಾನಗರಪಾಲಿಕೆಗೆ ಆಸ್ತಿತೆರಿಗೆ ಪಾವತಿಸದೆ ಬಾಕಿ ಇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ ಎಚ್ಚರಿಸಿದರು.