Wednesday, March 31, 2010

ಶ್ರೀನಿವಾಸರಿಗೆ ಆತ್ಮೀಯ ಬೀಳ್ಕೊಡುಗೆ

ಮಂಗಳೂರು,ಮಾರ್ಚ್ 31:ತಮ್ಮ ಆತ್ಮೀಯ ಹಾಗೂ ಸರಳ ನಡೆನುಡಿಗಳಿಂದ, ದಕ್ಷಿಣ ಕನ್ನಡ,ಮಡಿಕೇರಿ ಮತ್ತು ಉಡುಪಿಯಲ್ಲಿ ಕ್ಷೇತ್ರಪ್ರಚಾರ ನಿರ್ದೇಶನಾಲಯದ ಸಿನಿಮಾಗಳ ಪ್ರದರ್ಶನದಿಂದ ಎಲ್ಲರಿಗೂ ಪರಿಚಿತರಾದ ಗುಂಡಿಬೈಲು ಶ್ರೀನಿವಾಸ ಅವರಿಗೆ ಇಲಾಖಾ ವತಿಯಿಂದ ಇಂದು ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಅವರ ಅಧಿಕಾರಿಗಳು, ಸಹೋ ದ್ಯೋಗಿಗಳು, ಒಡ ನಾಡಿಗಳು ಹಾಗೂ ಮಂಗಳೂರು ವಾರ್ತಾ ಇಲಾಖೆಯ ಮಿತ್ರರು ಬೀಳ್ಕೊಡುಗೆ ಸಮಾರಂಭದಲ್ಲಿ ಉಪಸ್ಥಿತರಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ಶುಭ ಹಾರೈಸಿತು. ಕ್ಷೇತ್ರ ಪ್ರಚಾರ ಇಲಾಖಾ ಅಧಿಕಾರಿ ಟಿ.ಬಿ. ನಂಜುಂಡಸ್ವಾಮಿ ಅವರು ಶ್ರೀನಿವಾಸ ರೊಂದಿಗೆ ದುಡಿದ ಅವಧಿಗಳನ್ನು ಸ್ಮರಿಸಿಕೊಂಡರಲ್ಲದೆ, ಅವರ ಕರ್ತವ್ಯ ಪ್ರೀತಿ ಹಾಗೂ ಜನರಿಗೆ ಮಾಹಿತಿ ನೀಡುವ ಉತ್ಸಾಹವನ್ನು ಮೆಲುಕು ಹಾಕಿದರು. ಶ್ರೀನಿವಾಸರೊಂದಿಗೆ ದುಡಿಯುವ ಅನುಭವ ಅನನ್ಯವಾಗಿದ್ದು ಅವರಿಂದ ಬಹಳಷ್ಟು ವಿಷಯ ಅರಿತುಕೊಂಡ ಬಗೆಯನ್ನು ಅವರು ಹೇಳಿದರು. ಆರೋಗ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿರುವ ಸಿದ್ಧರಾಜು ಅವರು ಬೆಳ್ತಂಗಡಿಯ ಪಟ್ರಮೆಯಂತಹ ಕುಗ್ರಾಮಗಳಲ್ಲಿ ಮಂಗನ ಕಾಯಿಲೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದ ಅನುಭವವನ್ನು ಹಂಚಿಕೊಂಡರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಅವರು, ತಾನು ತನ್ನ ಕರ್ತವ್ಯವನ್ನು ಪ್ರೀತಿಯಿಂದ ನಿರ್ವಹಿಸಿದ ಸಂತೃಪ್ತಿ ಇದೆ. ತನ್ನ ಸೇವಾವಧಿಯಲ್ಲಿ ತಾನು ಗಳಿಸಿದ್ದು ಜನರ ಹಾಗೂ ಇಲಾಖಾಧಿಕಾರಿಗಳ ಪ್ರೀತಿಯನ್ನು.ಅದು ಶಾಶ್ವತ ಎಂದರು.ಸಮಾರಂಭದಲ್ಲಿ ಅವರ ಪತ್ನಿ, ಮಕ್ಕಳು ಉಪಸ್ಥಿತರಿದ್ದರು.