Sunday, March 21, 2010

ಗ್ರಾಮೀಣ ವರದಿಗಾರಿಕೆಗೆ ಪ.ಗೋ ಪ್ರಶಸ್ತಿ ಪ್ರದಾನ

ಮಂಗಳೂರು,ಮಾರ್ಚ್21:ವಸ್ತುನಿಷ್ಠ,ಸತ್ಯ,ಸಮರ್ಪಕ,ಸಮಾಜಮುಖಿ ವರದಿಗಳಿಂದ ಪತ್ರಿಕೆ ಮತ್ತು ಪತ್ರಕರ್ತರ ಮೌಲ್ಯ ಹೆಚ್ಚುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಜಯರಾಮರಾಜೇ ಅರಸ್ ಅವರು ಹೇಳಿದರು.ನಮ್ಮಲ್ಲಿ ಇಂದು ಸಿನಿಸಿಸಂ ಬೆಳೆದಿದ್ದು,ನಿರಾಶೆ,ಎಲ್ಲದರಲ್ಲೂ ಲೋಪಗಳನ್ನು ಹುಡುಕುವುದು ಅಭ್ಯಾಸವಾಗಿದೆ;ಸಕರಾತ್ಮಕ ಚಿಂತನೆ ಮತ್ತು ಸಮಾಜಮುಖಿ ಬರವಣಿಗೆಗಳಿಂದ ನಮಗೂ ನಮ್ಮ ಸುತ್ತಲಿನವರ ಬದುಕಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅವರಿಂದು ಪ್ರೆಸ್ ಕ್ಲಬ್ ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 2009 ರ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು.ಎಲ್ಲ ರಂಗದಲ್ಲೂ ಒಳ್ಳೆ ಕೆಲಸಗಳಾಗುತ್ತಿರುವ ಬಗ್ಗೆ, ಸಕರಾತ್ಮಕ ಚಿಂತನೆಗಳನ್ನು ಮೂಡಿಸಲು ಮಾಧ್ಯಮಗಳು ಆದ್ಯತೆ ನೀಡಬೇಕು. ಸಮಾಜದಲ್ಲಿರುವ ಅಗತ್ಯದ ಬಗ್ಗೆ ಕ್ಷಕಿರಣ ಬೀರುವ ಕೆಲಸಗಳನ್ನು ಮಾದ್ಯಮ ಮಾಡಬೇಕು ಎಂದ ಅವರು,ಪ್ರಜಾಪ್ರಭುತ್ವದ ಪ್ರಖರತೆಗೆ ಪತ್ರಿಕೆಗಳ ಅಗತ್ಯವನ್ನು ಒತ್ತಿಹೇಳಿದರು.ಸರ್ಕಾರ ರಾಜ್ಯ ಮಟ್ಟದಲ್ಲಿ ಉತ್ತಮ ವರದಿಗಾರಿಕೆಗೆ ಟಿ ಎಸ್ಸಾರ್ ಪ್ರಶಸ್ತಿಯನ್ನು ನೀಡುತ್ತಿದ್ದು,ಈ ವರ್ಷದಿಂದ ಮೊಹರೆ ಹನುಮಂತರಾಯ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ. ಪ್ರಶಸ್ತಿಗಳು ಉತ್ತಮ ವರದಿಗಾರಿಕೆಗೆ ಹಾಗೂ ವರದಿಗಾರರಿಗೆ ಪ್ರೇರಣೆ ನೀಡುತ್ತದೆ ಎಂದ ಅವರು, ಪೇಯ್ಡ್ ನ್ಯೂಸ್ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಪತ್ರಿಕೋದ್ಯಮ ಸಂಪೂರ್ಣವಾಗಿ ವಾಣೀಜ್ಯೀಕರಣವಾಗುವುದರಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೀಶ್ ಕೆ. ಅದೂರ್ ಅವರು ಪತ್ರಿಕೋ ದ್ಯಮದಲ್ಲಿ ತಮ್ಮ 13 ವರ್ಷಗಳ ಅನುಭವವನ್ನು ಹಂಚಿ ಕೊಂಡರಲ್ಲದೆ ಪೈಪೋಟಿ ಯುಗದಲ್ಲಿ ಮೌಲ್ಯಗಳನ್ನು ಉಳಿಸಲು ಆದ್ಯತೆ ನೀಡಬೇಕೆಂದು ಹೇಳಿದರು. ವರದಿ ಗಾರಿಕೆಯಲ್ಲಿ ಧನಾತ್ಮಕ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗುರುವಪ್ಪ ಬಾಳೆಪುಣಿ ಸ್ವಾಗತಿಸಿದರು.ಪುಷ್ಪರಾಜ್ ವಂದಿಸಿದರು.ಸಂಘದ ಅಧ್ಯಕ್ಷ ಹರ್ಷ ಅಧ್ಯಕ್ಷತೆ ವಹಿಸಿದ್ದರು.