Thursday, March 25, 2010

ಮಾರ್ಚ್ 27ರಂದು ಮಂಗಳೂರು-ಉಡುಪಿ ವೊಲ್ವೊ ಬಸ್ಸು ಆರಂಭ: ಸಚಿವ ಪಾಲೆಮಾರ್

ಮಂಗಳೂರು, ಮಾರ್ಚ್ 25 :(ಕರ್ನಾಟಕ ವಾರ್ತೆ)- ಮಂಗಳೂರು- ಉಡುಪಿ- ಮಣಿಪಾಲ ನಡುವೆ ಕೆ ಎಸ್ ಆರ್ ಟಿ ಸಿ ವೋಲ್ವೊ ಬಸ್ಸುಗಳು ಮಾರ್ಚ್ 27 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಮತ್ತು ಮಣಿಪಾಲದಿಂದ ಏಕ ಕಾಲದಲ್ಲಿ ಸಂಚಾರ ಆರಂಭಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೆಮಾರ್ ಮತ್ತು ಮಣಿಪಾಲದಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್. ಆಚಾರ್ಯ ಅವರು ಸರ್ಕಾರಿ ವೋಲ್ವೋ ಬಸ್ ಸಂಚಾರಕ್ಕೆ ಹಸಿರುವ ನಿಶಾನೆ ತೋರಿಸಲಿದ್ದಾರೆ.