ಅವರಿಂದು ನಗರದ ಹಲವೆಡೆ ಅಬಕಾರಿ ದಾಳಿ ನಡೆಸಿದ ಬಳಿಕ ಸುದ್ದಿ ಗಾರ ರೊಂದಿಗೆ ಮಾತ ನಾಡುತ್ತಿದ್ದರು. ಮಾರ್ಚ್ ಅಂತ್ಯಕ್ಕೆ 7,000 ಕೋಟಿ ರೂ. ರಾಜಸ್ವ ಸಂಗ್ರಹದ ನಿರೀಕ್ಷೆಯಿದ್ದು,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ ಅಂತ್ಯಕ್ಕೆ 137.04 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 23.96 ಲಕ್ಷ ಹೆಚ್ಚುವರಿ ಸಂಗ್ರಹ ವಾಗಿದೆ ಎಂದರು. ಈವರೆಗೆ 2606 ಅಬಕಾರಿ ದಾಳಿಗಳನ್ನು ನಡೆಸಲಾಗಿದೆ.106 ಮಂದಿಯನ್ನು ಬಂಧಿಸಲಾಗಿದೆ. 128 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂಬ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ನೀಡಿದರು.
ರಾಜ್ಯದಲ್ಲಿ ಕಳ್ಳಭಟ್ಟಿ ಹಾಗೂ ಅಕ್ರಮ ಮದ್ಯಹಾವಳಿ ತಡೆಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು,ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟ ಪ್ರದೇಶಗಳಿಗೆ ಅಬಕಾರಿ ದಾಳಿ ನಡೆಸಲಾಗುವುದಲ್ಲದೆ, ಜನರಿಗೆ ಇದರಿಂದಾಗುವ ಅನಾಹುತಗಳ ಬಗ್ಗೆ ವಿವರಿಸಿ ಅವರ ಮನ:ಪರಿವರ್ತನೆ ಮಾಡಲಾಗುವುದು.
ರಾಜ್ಯದಲ್ಲಿ ಎಂಎಸ್ ಐ ಎಲ್ 28 ಮದ್ಯ ಮಾರಾಟ ಮಳಿಗೆಗಳನ್ನು ಇದುವರೆಗೆ ತೆರೆದಿದೆ.ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, 430 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇನ್ನಷ್ಟು ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಲಲಾಗಿದೆ ಎಂದು ಹೇಳಿದರು.