Tuesday, February 23, 2010

ವೆಂಟೆಡ್ ಡ್ಯಾಂ ಕಾಮಾಗಾರಿ ಎರಡು ವರ್ಷಗಳಲ್ಲಿ ಪೂರ್ಣ: ಸಚಿವ ಪಾಲೇಮಾರ್

ಮಂಗಳೂರು,ಫೆಬ್ರವರಿ,23:ತುಂಬೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವೆಂಟೆಡ್ ಡ್ಯಾಂ ಕಾಮಾಗಾರಿ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು,ಇದರಿಂದ ಮಂಗಳೂರು ಮಹಾ ನಗರ ಪಾಲಿಕೆಯ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದು ರಾಜ್ಯ ಬಂದರು, ಪರಿಸರ ಹಾಗೂ ಜೀವಶಾಸ್ತ್ರ ಮತ್ತು ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣಾ ಜೆ.ಪಾಲೇಮಾರ್ ಹೇಳಿದರು.
ಮಂಗಳೂರು ಮಹಾ ನಗರಕ್ಕೆ ಕುಡಿಯುವ ನೀರು ಸರಬ ರಾಜ ಗುತ್ತಿರುವ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಇಂದು ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ನಂತರ ನಡೆದ ಕಾರ್ಯ ಕ್ರಮದಲ್ಲಿ ಮಾತ ನಾಡಿದರು. ನೂತನ ಅಣೆಕಟ್ಟು ನಿರ್ಮಾಣದ ಕಾಮಾಗಾರಿ ಈಗಾಗಲೇ ಆರಂಭಗೊಂಡಿದೆ.ಮಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನೂತನ ಡ್ಯಾಂ ನಲ್ಲಿ ಸುಮಾರು 14.47 ಮಿಲಿಯನ್ ಕ್ಯೂಬಿಕ್ ಲೀಟರ್ ನೀರು ಶೇಖರಣೆ ಆಗಲಿದ್ದು, ಮಂಗಳೂರಿನ ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದರು. ಸ್ಥಳಿಯ ಜನರಿಗೆ ಮತ್ತು ಕೃಷಿ ಭೂಮಿಗೆ ನೂತನ ಅಣೆಕಟ್ಟಿನಿಂದ ಸಮಸ್ಯೆ ಉಂಟಾದರೆ ಅಣೆಕಟ್ಟಿನ ಎತ್ತರವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಸ್ಥಳಿಯ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ನೂತನ ಅಣೆಕಟ್ಟು ನಿರ್ಮಾಣ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದರು.
ಮಂಗಳೂರು ಮೇಯರ್ ಶಂಕರ್ ಭಟ್, ಶಾಸಕ ಯೋಗಿಶ್ ಭಟ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಉಪ ಮೇಯರ್ ರಜನಿ ದುಗ್ಗಣ್ಣ, ನಗರ ಪಾಲಿಕೆ ಆಯುಕ್ತ ಡಾ. ವಿಜಯ ಪ್ರಕಾಶ್, ಪ್ರತಿಪಕ್ಷ ನಾಯಕ ಹರಿನಾಥ್, ನಗರ ಪಾಲಿಕೆ ಸದಸ್ಯರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.