Wednesday, February 24, 2010

ಸಾಮಾಜಿಕ ಸುರಕ್ಷತೆಗೆ ಹೊಸ ಪಿಂಚಣಿ ವ್ಯವಸ್ಥೆ

ಮಂಗಳೂರು,ಫೆ.24:ದೇಶದ ಸಾಮಾನ್ಯ ಪ್ರಜೆಗೂ ವೃದ್ಧಾಪ್ಯದ ದಿನಗಳಲ್ಲಿ ಪಿಂಚಣಿ ನೀಡುವಂತಹ ವಿನೂತನ ಯೋಜನೆಯನ್ನು ಭಾರತ ಸರ್ಕಾರ ಹಮ್ಮಿಕೊಂಡಿದ್ದು,ಈ ನೂತನ ಯೋಜನೆಯಡಿ ಮಂಗಳೂರನ್ನು ಪೈಲಟ್ ಪ್ರೊಜೆಕ್ಟ್ ನಡಿ ಸೇರಿಸಲಾಗಿದೆ ಎಂದು ಪ್ರಾಜೆಕ್ಟ್ ನ ಏಡಿಬಿಯ ಸಂವಹನ ಪರಿಣತ ಆಶೀಶ್ ಅಗರ್ ವಾಲ್ ಹೇಳಿದರು.
ಇಂದು ನಗರದಲ್ಲಿ ಯೋಜನೆ ಸಂಬಂಧ ಆಯೋ ಜಿಸಲಾದ ಒಂದು ದಿನದ ಕಾರ್ಯಾ ಗಾರದಲ್ಲಿ ಯೋಜನೆಯ ಬಗ್ಗೆ ವಿವರಿಸಿದ ಅವರು, ಈಗಾಗಲೇ ಯೋಜನೆ ಯಡಿ ದೇಶದಾದ್ಯಂತ ಇದುವರೆಗೆ 7.5 ಲಕ್ಷ ಖಾತೆಗಳನ್ನು ತೆರೆ ಯಲಾಗಿದ್ದು, 1000 ಕ್ಕೂ ಹೆಚ್ಚು ಸ್ಥಳಗಳಲ್ಲಿ, 21 ಬ್ಯಾಂಕ್ ಗಳಲ್ಲಿ ಸೌಲಭ್ಯವನ್ನು ಪಡೆಯ ಬಹುದಾಗಿದೆ.ಮಂಗಳೂರಿನ ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್, ಐಎಲ್&ಎಫ್ ಎಸ್ ಸೆಕ್ಯೂರಿಟೀಸ್ ಸರ್ವಿಸಸ್ ಲಿಮಿಟೆಡ್, ಯುಟಿಐ ಫೈನಾನ್ಷಿಯಲ್ ಸೆಂಟರ್, ಸಿಎಎಂಎಸ್, ಎಸ್ ಬಿ ಐ, ಮತ್ತು ಆಕ್ಸಿಸ್ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆಯಬಹುದಾಗಿದ್ದು, ಇದೊಂದು ಜನಸ್ನೇಹಿ ಯೋಜನೆಯಾಗಿದೆ ಎಂದು ವಿವರಿಸಿದರು.ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ ಅವರು, ಹೊಸ ಪಿಂಚಣಿ ವ್ಯವಸ್ಥೆ ಜನಪರ, ಸಾಮಾಜಿಕ ಸುರಕ್ಷಾ ಯೋಜನೆ ಯಾಗಿದ್ದು, ಸಾಮಾನ್ಯ ಜನರು ಯೋಜನೆಯ ಸದ್ಬಳಕೆ ಮಾಡಲು ಕರೆನೀಡಿದರು. ಸರ್ಕಾರ ಖಾಸಗಿ ಕಂಪೆನಿಗಳೊಂದಿಗೆ ಜಂಟಿಯಾಗಿ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಹಮ್ಮಿ ಕೊಳ್ಳುವುದರಿಂದ ಜನ ಸಾಮಾನ್ಯರಿಗೆ ಉಪಕಾರವಾಗಲಿದೆ ಎಂದರು. 2006 ಬಳಿಕ ಸೇವೆಗೆ ಸೇರಿದ ಸರ್ಕಾರಿ ನೌಕರರೂ ಇದರ ಲಾಭವನ್ನು ಪಡೆಯಬಹುದು ಎಂದು ಸಲಹೆ ಮಾಡಿದ ಅವರು, ಕಳೆದ ಎರಡು ದಶಕಗಳಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಾಗಿರುವ ಬದಲಾವಣೆಗಳು ಮತ್ತು ಸರ್ಕಾರದ ಆದ್ಯತಾ ಕ್ಷೇತ್ರಗಳ ಬಗ್ಗೆ ಮಾತನಾಡಿದರು. ಹೊಸ ಪಿಂಚಣಿ ವ್ಯವಸ್ಥೆಯಿಂದ ಸಾಮಾನ್ಯರಿಗೆ ಜೀವನ ಸುರಕ್ಷೆ ಲಭಿಸಲಿದೆ ಎಂದರು.
ಹೊಸ ಪಿಂಚಣಿ ವ್ಯವಸ್ಥೆಯ ಪ್ರಮುಖವಾಗಿ ಎಲ್ಲ ವರ್ಗದ ಜನರಿಗೆ ವೃದ್ಧಾಪ್ಯದಲ್ಲಿ ರಕ್ಷಣೆ ಒದಗಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಭಾರತ ಸರ್ಕಾರದ ವಿತ್ತ ಮಂತ್ರಾಲಯ ವ್ಯವಸ್ಥೆಗೊಳಿಸಿದೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರೂ ಸೇರಿದಂತೆ 18 ರಿಂದ 60 ವರ್ಷದೊಳಗಿನ ನಿವಾಸಿ ಅಥವಾ ಅನಿವಾಸಿ ಭಾರತೀಯರಿಗಾಗಿ ಇದೆ.
ಸ್ಟೇಕ್ಹೋ ಕಾರ್ಯಾಗಾರದಲ್ಲಿ ಎಲ್ಲ ಬ್ಯಾಂಕುಗಳ ಪ್ರತಿನಿಧಿಗಳು,ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.