Saturday, February 27, 2010

'ಪಾರದರ್ಶಕ ವ್ಯವಸ್ಥೆಗೆ ಮಾಹಿತಿ ಹಕ್ಕು ಉತ್ತಮ ಅಸ್ತ್ರ'

ಮಂಗಳೂರು,ಫೆ.27:ಮಾಹಿತಿ ಹಕ್ಕು ಪಾರದರ್ಶಕ ವ್ಯವಸ್ಥೆಗೆ ರಚನೆಗೆ ಅತ್ಯುತ್ತಮ ಅಸ್ತ್ರವಾಗಿದ್ದು, ಸಾರ್ವಜನಿಕರು ಈ ಹಕ್ಕಿನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಬೆಂಗಳೂರು ಮಿರರ್ ಪತ್ರಿಕೆಯ ಮೈಸೂರಿನ ಹಿರಿಯ ವರದಿಗಾರ ನಾಗರಾಜ ದೀಕ್ಷಿತ್ ಹೇಳಿದರು.
ಇಂದು ನಗರದ ವಾಣಿಜ್ಯ ತೆರಿಗೆ ಇಲಾಖಾ ನೌಕರರ ಸೌಧ ಕೊಟ್ಟಾರದಲ್ಲಿ ಇಲಾಖೆಯ ಸಹಕಾರ ದೊಂದಿಗೆ ಏರ್ಪಡಿಸಿದ ಮಾಹಿತಿ ಹಕ್ಕು ಕಾರ್ಯಾ ಗಾರದಲ್ಲಿ ಮಾತನಾಡುತ್ತಿದ್ದರು. ಸರ್ಕಾರಿ ಅಧಿಕಾರಿಗಳು ಮಾಹಿತಿ ಹಕ್ಕು ಕಾಯಿದೆ ಬಗ್ಗೆಗಿನ ಋಣಾತ್ಮಕವಾಗಿ ಪ್ರತಿಕ್ರಿಯಿಸದೆ, ಅದರಿಂದ ಜನರಿಗಾಗುವ ಅನುಕೂಲಗಳನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನಬದ್ಧ ಹಕ್ಕನ್ನು ನೀಡಿದ್ದು,ಈ ಹಕ್ಕುಗಳನ್ನು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮಾಹಿತಿ ಹಕ್ಕು ಇನ್ನಷ್ಟು ಬಲವನ್ನು ನೀಡಿದೆ ಎಂದರು.ಮಾಹಿತಿ ಹಕ್ಕಿನ ಇತಿಹಾಸ, ಬೆಳವಣಿಗೆ ಕೊನೆಯ ಕಾಯಿದೆಯಾಗಿ ರೂಪು ಗೊಂಡಿದ್ದು, ಅರ್ಜಿ ಸಲ್ಲಿಸುವ ವಿಧಾನ,ಮಾಹಿತಿ ಪಡೆಯುವ ವಿಧಾನ ಈ ಕಾಯಿದೆ ಯನ್ನು ಅಧಿಕಾರಿಗಳು ಸಕರಾ ತ್ಮಕವಾಗಿ ತೆಗೆದುಕೊಳ್ಳುವ ಬಗ್ಗೆ ನೆರೆದವರಿಗೆ ವಿವರವಾಗಿ ಮಾಹಿತಿ ನೀಡಿದರು.
ಸಂವಾದದಲ್ಲಿ ಮಾಹಿತಿ ನೀಡಲು ಇರುವ ಮಾನವ ಸಂಪನ್ಮೂಲದ ಕೊರತೆ, ಕೆಲಸದ ಹೊರೆಯ ಬಗ್ಗೆಯೂ ಚರ್ಚೆ ನಡೆಯಿತು. ವೇದಿಕೆಯಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಹಿಣಿ, ವಾಣಿಜ್ಯ ಇಲಾಖೆಯ ಅಧಿಕಾರಿಗಳಾದ ಗೋಪಾಲಗೌಡ ಬೆಂಗಳೂರು,ಮೇಲುಗಿರಿಯಪ್ಪ, ಮಂಗಳೂರು ವಿಭಾಗದ ಜಿ.ದಿವಾಕರ್ ರಾವ್, ಎನ್.ರಾಮಚಂದ್ರ ಭಟ್, ಯತೀಂದ್ರ,ಕಲಾವಿದ ಗಿರೀಶ್ ನಾವಡ ಉಪಸ್ಥಿತರಿದ್ದರು.