

ಮಂಗಳೂರು, ಫೆ.18: ಮೂಡ ಬಿದ್ರೆಯ ಜೈನ್ ಸ್ಕೂಲ್ ನ ಸಹ ಯೋಗ ದೊಂದಿಗೆ ವಾರ್ತಾ ಇಲಾಖೆ 16 ರಂದು ಮಾಹಿತಿ ಹಕ್ಕು ಮತ್ತು ಗ್ರಾಹಕ ಹಕ್ಕಿನ ಬಗ್ಗೆ ನಾಟಕ ಮತ್ತು ಚಲನಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಆರ್ ಗಜಾನನ ಅವರು ಮಕ್ಕಳಿಗೆ ಪ್ರಸಕ್ತ ಪರಿಸರದ ಬಗ್ಗೆ ಇರಬೇಕಾದ ತಿಳು ವಳಿಕೆಯನ್ನು ಮತ್ತು ಅಗತ್ಯವನ್ನು ಪ್ರತಿ ಪಾದಿಸಿದರು. ಕೃಷ್ಣಪುರ ಗಣೇಶ್ ನಾವಡ ಅವರ ತಂಡದಿಂದ ಮಾಹಿತಿ ಮತ್ತು ಗ್ರಾಹಕ ಹಕ್ಕಿನ ಬಗ್ಗೆ ಮಕ್ಕಳಿಗೆ ನಾಟಕ ಪ್ರದರ್ಶಿಸಲಾಯಿತು.ಶಿಕ್ಷಕ ಆರ್. ರಾಜ್ ಕುಮಾರ್ ಅವರು ಸಹಕರಿಸಿದರು.