Monday, February 1, 2010

ಜಸ್ಟಿಸ್ ಸೋಮಶೇಖರ ಆಯೋಗದಿಂದ ಮಧ್ಯಂತರ ವರದಿ ಸಲ್ಲಿಕೆ


ಮಂಗಳೂರು, ಫೆ,1: ರಾಜ್ಯದಲ್ಲಿ ಕಳೆದ ಬಾರಿ ಪ್ರಾರ್ಥನ ಮಂದಿರ ಗಳ ಮೇಲೆ ನಡೆದ ದಾಳಿ ಸಂಬಂಧ ವಿಚಾರಣೆ ನಡೆಸಲು ನೇಮಕ ವಾದ ಜಸ್ಟಿಸ್ ಬಿ.ಕೆ. ಸೋಮ ಶೇಖರ್ ಆಯೋಗ ತಾನು ವಿಚಾರಣೆ ನಡೆಸಿ ಸಿದ್ದಪಡಿಸಿದ ಮಧ್ಯಂತರ ವರದಿಯನ್ನು ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು.ನ್ಯಾಯಾಮೂರ್ತಿ ಬಿ.ಕೆ. ಸೋಮಶೇಖರ್ ಅವರು ಮಧ್ಯಂತರ ವರದಿಯನ್ನು ಹಸ್ತಾಂತರಿಸಿದರು. ಸರಕಾರದ ಪರವಾಗಿ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ ಅಭಿಜೀತ್ ದಾಸ್ ಗುಪ್ತಾ, ಮತ್ತು ಕಾನೂನು ಹಾಗೂ ನ್ಯಾಯಾ ಇಲಾಖೆಯ ಕಾರ್ಯದರ್ಶಿ ಎಸ್. ಸಿದ್ದಲಿಂಗೇಶ್ವರ ಅವರು ಮಧ್ಯಂತರ ವರದಿಯನ್ನು ಸ್ವೀಕರಿಸಿದರು. ಪಶ್ಚಿಮ ವಲಯ ಐಜಿಪಿ ಗೋಪಾಲ್ ಬಿ. ಹೊಸೂರು, ಜಿಲ್ಲಾ ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಜಿಲ್ಲಾ ಪಂಚಾಯತ್ ಸಿಈಓ ಶಿವಶಂಕರ್, ಮತ್ತು ಆಯೋಗದ ಸದಸ್ಯರು ಉಪಸ್ಥಿತರಿದ್ದರು.