Saturday, February 27, 2010

ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವೃದ್ದಿಗೆ ಕ್ರಮ : ಸಚಿವ ಗೂಳಿಹಟ್ಟಿ ಶೇಖರ್


ಮಂಗಳೂರು, ಫೆಬ್ರವರಿ,27: ಮಂಗಳೂರಿನ ಮಂಗಳಾ ಕ್ರೀಡಾಂ ಗಣವನ್ನು ಸಮಗ್ರವಾಗಿ ಅಭಿವೃದ್ದಿ ಗೊಳಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಕ್ರೀಡಾ ಸಚಿವ ಗೂಳಿ ಹಟ್ಟಿ ಶೇಖರ್ ಅವರು ಭರವಸೆ ನೀಡಿದ್ದಾರೆ. ಮಂಗಳೂರಿಗೆ ಆಗಮಿಸಿದ ಸಚಿವರು ಮಂಗಳಾ ಕ್ರೀಡಾಂಗಣ, ಈಜು ಕೊಳ ಮತ್ತು ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣ ವನ್ನು ವೀಕ್ಷಣೆ ಮಾಡಿ, ಮಂಗಳೂರು ದಕ್ಷಿಣ ಶಾಸಕ ಎನ್. ಯೋಗಿಶ್ ಭಟ್, ಕ್ರಿಡಾಪಟುಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕ್ರಿಡಾ ಮತ್ತು ಯುನಜನ ಸೇವಾ ಇಲಾಖೆಯನ್ನು ಇನ್ನಷ್ಟು ಸದ್ರಢಗೊಳಿಸಲು ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ನಿರೀಕ್ಚಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ರಿಡಾ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಅತ್ಲೆಟಿಕ್ ಕ್ರಿಡಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವಂತೆ ಉತ್ತೇಜನದ ಮಾತುಗಳನ್ನಾಡಿದರು.