Wednesday, August 1, 2012

'ಸಕಾಲ' ಸಮಾರೋಪ

ಮಂಗಳೂರು, ಆಗಸ್.01: ದಕ್ಷಿಣಕನ್ನಡ ಜಿಲ್ಲಾ ವಾರ್ತಾ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ನಡೆದ ಸಕಾಲ ಕಾಯ್ದೆಯ ಜಾಗೃತಿ ಅಭಿಯಾನ ಮಂಗಳವಾರ(ದಿನಾಂಕ 31-7-12ರಂದು) ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಾರೋಪಗೊಂಡಿತು.
ಹಳೆಯಂಗಡಿ ನಾರಾಯಣ ಸನಿಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭವನ್ನು ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ತಮ್ಕಿ ಭಾರಿಸುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ವಾರ್ತಾಧಿ ಕಾರಿಗ ಳಾದ ಶ್ರೀಮತಿ ರೋಹಿಣಿ , ಗ್ರಾಮ ಪಂಚಾ ಯತ್ ಸದಸ್ಯರಾದ ಅಬ್ದುಲ್ ಖಾದರ್, ವಸಂತ ಬರ್ನಾಡ್, ಗ್ರಾಮ ಪಂಚಾ ಯತ್ ಅಭಿವೃದ್ಧಿ ಅಧಿಕಾರಿ ಲೋಕ ನಾಥ್, ಸಂಸಾರ ಕಲಾ ತಂಡದ ನಿರ್ದೇಶಕರ ಮೌನೇಶ್ ವಿಶ್ವಕರ್ಮ ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಂಸಾರ ತಂಡದ ಕಲಾವಿದರು ಸಕಾಲ ಕಾಯ್ದೆಯ ಕುರಿತಾದ ಸಕಾಲ ಜಾಗೃತಿ ನಾಟಕವನ್ನು ಪ್ರದರ್ಶಿಸಿದರು. ಜಿಲ್ಲೆಯಾದ್ಯಂತ ತಂಡ ಸಂಚರಿಸಿ ಒಟ್ಟು 54 ಕಾರ್ಯಕ್ರಮಗಳನ್ನು ನೀಡಿದೆ.