Wednesday, May 5, 2010

ಎನ್ ಐ ಟಿ ಕೆಯಲ್ಲಿ ಏಳನೇ ಘಟಿಕೋತ್ಸವ


ಮಂಗಳೂರು, ಮೇ5: ಸುರತ್ಕಲ್ ನ ಎನ್ ಐ ಟಿ ಕೆ ಯಲ್ಲಿ ಇಂದು ನಡೆದ ಏಳನೇ ಘಟಿಕೋ ತ್ಸವದಲ್ಲಿ ಒಟ್ಟು 875 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 50 ಮಂದಿಗೆ ಪಿ ಎಚ್ ಡಿ ಪದವಿ, ಹಾಗೂ ವಿವಿಧ ವಿಭಾಗ ಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಗೌರವಾನ್ವಿತ ರಾಜ್ಯ ಪಾಲರಾದ ಹಂಸರಾಜ್ ಭಾರದ್ವಾಜ ಅವರು ಚಿನ್ನದ ಪದಕ ಹಾಗೂ ಸರ್ಟಿಫಿಕೇಟ್ ಪ್ರಧಾನ ಮಾಡಿದರು. ಘಟಿಕೋತ್ಸವದಲ್ಲಿ ಬಿಒಜಿ ಅಧ್ಯಕ್ಷ ಪ್ರೊ.ಗೋವರ್ಧನ ಮೆಹ್ತಾ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ನಿರ್ದೇಶಕರಾದ ಪ್ರೊ. ಸಂದೀಪ್ ಸಂಚೈತಿ ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನಾಡಿದರು.