Sunday, May 23, 2010

ಎಲ್ಲ ಮೃತದೇಹ ವೆನ್ ಲಾಕ್ ನಲ್ಲಿ,

ಮಂಗಳೂರು,ಮೇ23:ನಿನ್ನೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ 28 ದೇಹಗಳನ್ನು ವೆನ್ ಲಾಕ್ ನಲ್ಲಿರಿಸಿದ್ದು,ಮೃತದೇಹ ಗುರುತುಪತ್ತೆಯಲ್ಲಿ ಜಿಲ್ಲಾಡಳಿತ ನಿರತವಾಗಿದೆ ಎಂದು ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ. ಮೃತದೇಹಗಳ ಗುರುತಿಸುವಿಕೆಗೆ ಅನುಕೂಲವಾಗಲು ಎಲ್ಲಾ ಆಸ್ಪತ್ರೆಗಳಿಂದ ಶವವನ್ನು ವೆನ್ ಲಾಕ್ ಗೆ ತರಲಾಗಿದ್ದು, ಇಂದು ಸಂಜೆಯೊಳಗೆ ಮೃತದೇಹ ಗುರುತಿಸುವಿಕೆ ಯತ್ನ ಸಂಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಶವ ಗುರುತಿಸುವಿಕೆಯಲ್ಲಿ ಗೊಂದಲಗಳಿರುವ ಶವಗಳ ಡಿ ಎನ್ ಎ ಪರೀಕ್ಷೆ ನಡೆಸಲು ಹೈದ್ರಾಬಾದ್ ನಿಂದ ಡಾ. ಮಧುಸೂದನ ರೆಡ್ಡಿ ಅವರ ನೇತ್ರತ್ವದ ತಂಡ ನಗರಕ್ಕೆ ಆಗಮಿಸಿದ್ದು, ರಕ್ತ ಸಂಬಂಧಿಗಳ ಫೋಟೋ ಮತ್ತು ರಕ್ತ ತೆಗೆಯುವ ಪ್ರಕ್ರಿಯೆ ನಡೆಯುತ್ತಿದ್ದು, 3.30 ರವರೆಗೆ ಮೃತದೇಹ ಕ್ಲೇಮ್ ಮಾಡಲು ಅವಕಾಶ ನೀಡಿದೆ. ಏರ್ ಇಂಡಿಯಾ ಮೃತ ದೇಹಗಳಿನ್ನಿಡಲು ಶವಪೆಟ್ಟಿಗೆ ನೀಡಿದ್ದು, ಶವ ಪರೀಕ್ಷೆ ಬಳಿಕ ಪತ್ತೆಯಾಗದೆ ಉಳಿದ ಶವಗಳನ್ನು ನಗರದಲ್ಲಿ ಲಭ್ಯವಿರುವ ಶೈತ್ಯಾಗಾರ ದಲ್ಲಿ ಶವಗಳನ್ನು ಇಡಲು ಸಿದ್ಧತೆ ಮಾಡಲಾಗಿದೆ.