Saturday, May 22, 2010

ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಭೇಟಿ, ಪರಿಹಾರ ಘೋಷಣೆ

ಮಂಗಳೂರು,ಮೇ22: ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು ಬೆಳಗ್ಗೆ 6.05ರ ಹೊತ್ತಿಗೆ ಬಜಪೆ ಸಮೀಪ ಅಪಘಾತಕ್ಕೀಡಾಗಿದ್ದು, ದುರಂತದ ಮಾಹಿತಿ ಲಭಿಸಿದ ತಕ್ಷಣ ವಿಮಾನ ಯಾನ ರಾಜ್ಯ ಸಚಿವ ಪ್ರಫುಲ್ ಕುಮಾರ್ ಪಟೇಲ್ ಅವರು ಘಟನಾ ಸ್ಥಳಕ್ಕೆ ಆಗಮಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿ, ದುರಂತದಲ್ಲಿ ಮಡಿದವರಿಗೆ 76 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದರು. ದುರಂತಕ್ಕೆ ಕಾರಣ ಹುಡುಕಲು ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್ ವತಿಯಿಂದ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದರು. ಪೈಲೆಟ್ ಗಳು ಬಹಳಷ್ಟು ಪರಿಣತರಿದ್ದು, ವಾತಾವರಣವೂ ಶುಭ್ರವಾಗಿತ್ತು. ಅಪಘಾತಕ್ಕೆ ಕಾರಣ ತನಿಖೆಯ ಬಳಿಕವಷ್ಟೆ ತಿಳಿಯಲಿದೆ ಎಂದರು. ಕೇರಳ ಮುಖ್ಯಮಂತ್ರಿ,ಗೃಹಮಂತ್ರಿ, ಕಾಸರಗೋಡು ಜಿಲ್ಲಾಧಿಕಾರಿ, ಎ ಡಿ ಎಂ ಸೇರಿದಂತೆ ಎಲ್ಲ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದರು.