ಮಂಗಳೂರು,ಜ.30:ದೇಶದ ಆರ್ಥಿಕ,ಸಾಮಾಜಿಕ ಬೆಳವಣಿಗೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಪಾತ್ರ ಪ್ರಮುಖ ಎಂದು ಐಜಿಪಿ ಗೋಪಾಲ್ ಹೊಸೂರ್ ಹೇಳಿದರು.ಉತ್ತರ ಕರ್ನಾಟಕದಲ್ಲಿ ಪತ್ರಿಕೆಯ ಪ್ರಭಾವ,ಪತ್ರಿಕೆಯ ಸಾಮಾಜಿಕ ಬದ್ಧತೆಯ ಬಗ್ಗೆ ಹೊಸೂರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಅವರಿಂದು ಕೊಡಿಯಾಲ್ ಬೈಲ್ ನ ಕರ್ಣಾಟಕ ಬ್ಯಾಂಕ್ ನ ಆಡಿಟೋರಿಯಂ ನಲ್ಲಿ ದಕ್ಷಿಣ ಕನ್ನಡ -ಉಡುಪಿ-ಕಾಸರಗೋಡು ಜಿಲ್ಲೆಗಳ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ದಿ. ಹಾರನಹಳ್ಳಿ ರಾಮಸ್ವಾಮಿಯವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸಹಬಾಳ್ವೆ ಸಾಮಾಜಿಕ ಬಾಳ್ವೆಗೆ ಆರೋಗ್ಯಕರ ಚರ್ಚಾ ಸ್ಪರ್ಧೆಗಳ ಅಗತ್ಯವನ್ನು ಪ್ರತಿಪಾದಿಸಿದ ಹೊಸೂರ್, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚರ್ಚೆಯ ಪಾತ್ರವನ್ನು ವಿವರಿಸಿದರು.ಹರಿಕೃಷ್ಣ ಪುನರೂರು ಅವರು ಉದ್ಘಾಟನಾ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಲೋಕಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಅಶೋಕ ಹಾರನಹಳ್ಳಿ ವಹಿಸಿದ್ದರು. ಸಹಸಂಪಾದಕ ಅನಿಲ್ ಕುಮಾರ್ ಸ್ಘಾಗತಿಸಿದರು. ಸಂಪಾದಕ ಹುಣಸವಾಡಿ ರಾಜನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ಣಾಟಕ ಬ್ಯಾಂಕಿನ ನಾನ್ ಎಕ್ಸಿಕ್ಯೂಟಿವ್ ಛೇರ್ ಮನ್ ಅನಂತಕೃಷ್ಣ, ಬಾರ್ ಕೌನ್ಸಿಲ್ ನ ಸೀತಾರಾಂ ಶೆಟ್ಟಿ,ಕಾರ್ಯದರ್ಶಿ ನಾರಾಯಣ ಉಪಸ್ಥಿತರಿದ್ದರು.