Sunday, January 17, 2010

ಜ್ಯೋತಿ ಬಸು ನಿಧನಕ್ಕೆ ಮುಖ್ಯಮಂತ್ರಿ ಸಂತಾಪ



ಮಂಗಳೂರು, ಜ.17: ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ ಜ್ಯೋತಿ ಬಸು ನಿಧನಕ್ಕೆ ಕರ್ನಾಟಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಜ್ಯೋತಿ ಬಸು ನಿಧನ ಕೇವಲ ಪಶ್ಷಿಮ ಬಂಗಾಳಕ್ಕೆ ಆದ ನಷ್ಟವಲ್ಲ, ಇಡೀಯ ದೇಶಕ್ಕೇ ನಷ್ಟವಾಗಿದೆ; ಒಬ್ಬ ಹಿರಿಯ ರಾಜಕೀಯ ಮುತ್ಸದ್ದಿ ಯಾಗಿದ್ದ ಅವರು ಅನೇಕ ಆಭಿವೃದ್ದಿ ಕಾರ್ಯಗಳಿಗೆ ಕಾರಣರಾಗಿದ್ದರು.ದೇಶದ ಅಭಿವೃದ್ಧಿಯಲ್ಲಿ ಅವರ ಹಿರಿತನ,ಅನುಭವದ ಕೊರತೆ ನಮಗಾದ ನಷ್ಟ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮತ್ತು ಶ್ರೀಕೃಷ್ನ ಮಠದ ಪರ್ಯಾಯದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಬಜಪೆ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಇಂದು ಉಡುಪಿಯಲ್ಲಿ ತಂಗುವ ಅವರು,18ರಂದು ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ದಕ್ಷಿಣ ಕನ್ನಡದ ಪುತ್ತೂರಿಗೆ ಆಗಮಿಸಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವರು.