Sunday, February 26, 2012

ಬಜೆಟ್ ನಲ್ಲಿ ಯುವಜನತೆಗೆ ಒತ್ತು :ಡಿ.ವಿ.ಸದಾನಂದ ಗೌಡ

ಮಂಗಳೂರು,ಫೆಬ್ರವರಿ.26: ರಾಷ್ಟ್ರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.40 ಕ್ಕಿಂತಲೂ ಹೆಚ್ಚಿರುವ ಯುವಜನತೆಯ ಕನಸುಗಳನ್ನು ಸಾಕಾರಗೊಳಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಯುವ ಜನರಿಗಾಗಿಯೆ ಪ್ರತ್ಯೇಕ ಬಜೆಟ್ ಮಂಡಿಸಲು ಉತ್ಸುಕವಾಗಿದೆ, ಆದರೆ ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಮುಂದಿನ ವರ್ಷ ಬಜೆಟ್ ನಲ್ಲಿ ಯುವಜನರಿಗಾಗಿ ಪ್ರತ್ಯೆಕ ಬಜೆಟನ್ನು ಮಂಡಿಸಲಾಗುವುದು, ಆದರೆ ಈ ಬಾರಿಯ ಬಜೆಟ್ ನಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಕರ್ನಾಟಕದ ಮಾನ್ಯಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ತಿಳಿಸಿದ್ದಾರೆ.ಅವರು ಇಂದು ಉಡು ಪಿಗೆ ತೆರ ಳುವ ಮಾರ್ಗ ದಲ್ಲಿ ಮಂಗ ಳೂರು ವಿಮಾನ ನಿಲ್ದಾ ಣದಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡು ತ್ತಿದ್ದರು.ದೇಶ ದಲ್ಲಿಯೇ ಪ್ರಥಮ ಬಾರಿಗೆ ರೈ ತಾಪಿ ಜನ ರಿಗಾ ಗಿಯೇ ಪ್ರತ್ಯೇಕ ಬಜೆಟ್ ನೀಡಿದ ಮಾದ ರಿಯ ಲ್ಲಿಯೇ ಯುವ ಜನ ರಿಗೂ ಪ್ರತ್ಯೇಕ ಬಜೆಟ್ ಮಂಡಿ ಸುವು ದಾಗಿ ಅವರು ತಿಳಿ ಸಿದರು.
ಲೋಕಾಯುಕ್ತ ನೇಮಾಕಾತಿ ಬಗ್ಗೆ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳಿಗೆ, ವಿರೋಧಪಕ್ಷದ ನಾಯಕರಿಗೆ ಎಲ್ಲರಿಗೂ ಸೂಕ್ತ ವ್ಯಕ್ತಿಯನ್ನು ಗುರ್ತಿಸುವಂತೆ ಈಗಾಗಲೆ ಪತ್ರ ಬರೆಯಲಾಗಿದೆ ಎಂದ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರಿಗೂ ಒಳಿತಾಗುವಂತೆ ಸಿದ್ದಪಡಿಸಲಾಗುತ್ತಿದೆ ಎಂದರು.
ಇದ ಕ್ಕಾಗಿ ಮುಂದಿನ ವಾರ ವಿವಿಧ ರೈತ ಸಂಘ ಗಳ ನಾಯ ಕರ ಜೊತೆ ಬಜೆಟ್ ಕುರಿ ತಂತೆ ಚರ್ಚಿ ಸುವು ದಾಗಿ ತಿಳಿಸಿದ ಅವರು, ಈಗಾ ಗಲೇ ಶೇ.60-65 ರಷ್ಟು ಇಲಾಖೆ ಗಳ ಪರಿ ಶೀಲನೆ ಕಾರ್ಯ ಮುಗಿ ದಿದ್ದು, ಎಲ್ಲಾ ಇಲಾಖೆ ಗಳ ಪರಿ ಶೀಲನೆ ಕಾರ್ಯ ವನ್ನು ನಡೆಸು ವುದಾಗಿ ತಿಳಿಸಿ ದರು.
ರಾಜ್ಯಕ್ಕೆ ಉತ್ತಮ ಬಜೆಟ್ ನೀಡುವಲ್ಲಿ ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸುವುದಾಗಿ ತಿಳಿಸಿದರು. ಮುಖ್ಯ ಮಂತ್ರಿಗಳ ಜೊತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ. ಶೈಲಜಾ ಭಟ್, ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ,ಮೇಯರ್ ಪ್ರವಿಣ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಮುಂತಾದವರು ಹಾಜರಿದ್ದರು.