Wednesday, February 15, 2012

800 ಕೆ. ಜಿ.ನಿಷೇಧಿತ ಪ್ಲಾಸ್ಟಿಕ್ ವಶ

ಮಂಗಳೂರು, ಫೆಬ್ರವರಿ15: ಪ್ಲಾಸ್ಟಿಕ್ ನಿಷೇಧ ಕಾನೂನು ಉಲ್ಲಂಘಿಸಿ 20ಮೈಕ್ರಾನ್ ಗಳಿಗಿಂತ ಕಡಿಮೆ ಇದ್ದ 800 ಕೆಜೆ ಪ್ಲಾಸ್ಟಿಕ್ ದಾಸ್ತಾನನ್ನು ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ನಿರ್ದೇಶನದಂತೆ ಅನಿರೀಕ್ಷಿತ ದಾಳಿ ನಡೆಸಿ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು ಇಂದು ವಶಪಡಿಸಿಕೊಂಡಿಸಿದ್ದಾರೆ.
ಕಾನೂನು ಉಲ್ಲಂಘಿ ಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಗೊಳ್ಳು ವುದಾಗಿ ತಿಳಿಸಿದ ಪರಿಸರ ಇಂಜಿ ನಿಯರ್ ಮಂಜು ನಾಥ್ ಅವರು, ಪ್ಲಾಸ್ಟಿಕ್ ಹೌಸ್ ಮತ್ತು ಪ್ಲಾಸ್ಟಿಕ್ ವರ್ಲ್ಡ್ ಕಳೆದ ಬಾರಿಯ ಎಚ್ಚರಿಕೆಯ ಹೊರತಾ ಗಿಯೂ ಮತ್ತೆ ತಪ್ಪನ್ನು ಪುನಾರ ವರ್ತಿ ಸಿದ್ದು ಕಾನೂನು ಉಲ್ಲಂಘ ನೆಯ ಇಂತಹ ಪ್ರಕರ ಣಗಳ ವಿರುದ್ಧ ಕಠಿಣ ಕ್ರಮ ಕೈಗೊ ಳ್ಳುವ ಎಚ್ಚ ರಿಕೆಯನ್ನು ಮಹಾ ನಗರ ಪಾಲಿಕೆ ಆಯುಕ್ತರು ನೀಡಿದ್ದಾರೆ.
ಈ ಬಾರಿ ಮೀನಾಕ್ಷಿ ಪ್ಲಾಸ್ಟಿಕ್ ನವರು ಇಂತಹುದೇ ಮಾದರಿಯ ನಿಷೇಧಿತ ಪ್ಲಾಸ್ಟಿಕ್ ತಯಾರಿಸಿ ದಾಸ್ತಾನಿರಿಸಿ ಪತ್ತೆಯಾಗಿದ್ದು ಕಾನೂನಿನುಸಾರ ಕ್ರಮಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ಉತ್ಪಾದಿಸುವುದಾಗಲೀ, ವ್ಯಾಪಾರ ಮಾಡುವುದಾಗಲೀ ಕಂಡು ಬಂದಲ್ಲಿ ಶಿಕ್ಷೆ ಖಚಿತ ಎಂದಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ಚೀಲಗಳು ಬೆಂಗಳೂರು, ಮುಂಬಯಿ, ಡಾಮನ್ ನಿಂದ ವಿತರಣೆಯಾಗುವುದರ ಜೊತೆಗೆ ಬೈಕಂಪಾಡಿಯಲ್ಲೂ ಉತ್ಪಾದಿಸಲಾಗುತ್ತಿದೆ ಎಂಬ ಅಂಶ ಘಟನೆಯಿಂದ ಬೆಳಕಿಗೆ ಬಂದಿದ್ದು ಉತ್ಪಾದಕರು ಮತ್ತು ವಿತರಕರು ಕಾನೂನು ಪಾಲಿಸಬೇಕೆಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.