Saturday, August 29, 2009

ಮಂಗಳೂರು-ಬೆಂಗಳೂರು ಹಗಲು ರೈಲು ಆರಂಭ

ಮಂಗಳೂರು,ಆ.29:ಕರಾವಳಿ ಜನರ ಬಹಳ ದಿನಗಳ ಬೇಡಿಕೆ ಇಂದು ಸಾಕಾರಗೊಂಡಿದ್ದು, ಮಂಗಳೂರು-ಬೆಂಗಳೂರು ಹಗಲು ರೈಲನ್ನು ಕೇಂದ್ರ ರೈಲ್ವೇ ಸಹಾಯಕ ಸಚಿವ ಶ್ರೀ ಕೆ. ಎಚ್ ಮುನಿಯಪ್ಪ ಅವರು ಇಂದು ಪೂರ್ವಾಹ್ನ 8.40 ಗಂಟೆಗೆ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಹಸಿರು ನಿಶಾನೆ ತೋರಿ ಪುತ್ತೂರಿನವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ.


ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯಖಾತೆ ಸಚಿವ ಶ್ರೀ ಎಂ. ವೀರಪ್ಪ ಮೊಯ್ಲಿ ಮುಖ್ಯ ಅತಿಥಿಗಳಾಗಿದ್ದರು. ವಿಶೇಷ ಅತಿಥಿಗಳಾಗಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಶ್ರೀ ಡಿ.ವಿ.ಸದಾನಂದ ಗೌಡ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ, ಮೇಯರ್ ಶ್ರೀ ಎಂ. ಶಂಕರ್ ಭಟ್ , ಶಾಸಕರಾದ ಶ್ರೀ ರಮಾನಾಥ ರೈ, ಯು.ಟಿ. ಖಾದರ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ನಂ.6516
ಮಂಗಳೂರು-ಅರಸೀಕೆರೆ-ಯಶವಂತಪುರಕ್ಕೆ ವಾರದಲ್ಲಿ 3 ದಿನ ಪೂರ್ವಾಹ್ನ 8.40ಕ್ಕೆ ಹೊರಡುವ ರೈಲು ಸಂಜೆ 7ಕ್ಕೆ ಯಶವಂತಪುರ ತಲುಪಲಿದೆ. ರೈಲಿನಲ್ಲಿ 3 ಎಸಿ 3 ಟಯರ್ 1ಬೋಗಿ, ದ್ವಿತೀಯ ದರ್ಜೆ 9 ಹಾಗೂ ಸಾಮಾನ್ಯ ದರ್ಜೆ 2ಬೋಗಿ ಸೇರಿದಂತೆ 12 ಕೋಚ್ ಇರುತ್ತದೆ. ಯಶವಂತಪುರದಿಂದ ಪೂರ್ವಾಹ್ನ 7.30ಕ್ಕೆ ಹೊರಡುವ ರೈಲು ಅರಸೀಕೆರೆ ಮಾರ್ಗವಾಗಿ ಮಂಗಳೂರಿಗೆ ಸಂಜೆ 5.55ಕ್ಕೆ ತಲುಪಲಿದೆ.