
ಇಂದು ಪುರಭವನದಲ್ಲಿ ಏರ್ಪಡಿಸಲಾಗಿದ್ದ ವೇತನ ಬಟವಾಡೆ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಲೊಳ್ಳಬೇಕಾದ ಅನಿರ್ವಾಯತೆಯನ್ನು ತಿಳಿಸಿ ಹೇಳಿದರಲ್ಲದೆ ಅಧಿಕಾರಿಗಳು ಎಲ್ಲ ಕೆಲಸಕ್ಕೂ ಕೇಸ್ ವರ್ಕರ್,ಸೂಪರಿಂಟೆಂಡೆಂಟ್ ಗಳನ್ನು ಅವಲಂಬಿಸದೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಎಚ್ ಆರ್ ಎಂ ಎಸ್ ವ್ಯವಸ್ಥೆ ನೆರವಾಗ ಲಿದೆ ಎಂದರು.
ಎಚ್ ಆರ್ ಎಂ ಎಸ್ ನ ಯೋಜನಾ ನಿರ್ದೇಶಕರಾದ ಶಂಕರ್ ಅವರು ಮಾತನಾಡಿ, 2008ರ ಹಿಂದೆ ಇದ್ದ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಇರುವ ವ್ಯತ್ಯಾಸವನ್ನು ತಿಳಿಸಿ ಹೇಳಿ ರಾಜ್ಯದಲ್ಲಿ 20,000 ಬಟವಾಡೆ ಅಧಿಕಾರಿಗಳಿದ್ದು, ಎಚ್ ಆರ್ ಎಂ ಎಸ್ ನಿಂದಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರ ಸಂಪೂರ್ಣ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ ಎಂದರು. ಇದರಿಂದ ನೌಕರರಿಗೆ, ಆಡಳಿತಕ್ಕೆ ಹಾಗೂ ಸುಗಮ ಕೆಲಸಕ್ಕೆ ಆಗುವ ಅನುಕೂಲತೆಗಳನ್ನು ವಿವರಿಸಿದ ಅವರು, ನಿವೃತ್ತಿಯ ಸಂದರ್ಭದಲ್ಲಿ ತಕ್ಷಣವೇ ನೌಕರನಿಗೆ ಎಲ್ಲಾ ಸವಲತ್ತುಗಳು ದೊರೆಯಲಿದೆ ಎಂದರು.
